ಮಡಿಕೇರಿ, ಮಾ. 1: ಎಸ್.ಎಸ್.ಎಲ್.ಸಿ. ರಾಜ್ಯಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ತಾ. 3ರಂದು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಮಡಿಕೇರಿ ಪ್ರಕೃತಿ ಬಡಾವಣೆಯಲ್ಲಿರುವ ಸಂತ ಜೋಸೆಫ್ ಕಾನ್ವೆಂಟ್ ರಸ್ತೆ, ಕೊಡಗು ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಕಟ್ಟಡದಲ್ಲಿ ವಿತರಿಸಲಾಗುವದೆಂದು ಸಂಘದ ಪ್ರಕಟಣೆ ತಿಳಿಸಿದೆ.