ಮಡಿಕೇರಿ, ಮಾ. 1: ಕಾಫಿ ಮಂಡಳಿ ವತಿಯಿಂದ ಬೆಟ್ಟತ್ತೂರು ಗ್ರಾಮಸ್ಥರಿಗೆ ಇತ್ತೀಚೆಗೆ ಚೆಟ್ಟಳ್ಳಿಯಲ್ಲಿ ಕಾಫಿ ಬೆಳೆ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾಫಿ ಮಂಡಳಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಶಿವಪ್ರಸಾದ್ ಬದ್ರು ಲಮಾನಿ, ಡಾ. ಬಿ.ಪಿ. ಶಿವಲಿಂಗು ಕಾಫಿ ಬೆಳೆಯ ಕುರಿತು ಮಾಹಿತಿ ಮಾಡಿಕೊಟ್ಟರು. ಮಂಡಳಿ ಎಸ್.ಎಲ್.ಓ. ಜಯರಾಂ ಅವರು ವ್ಯವಸ್ಥೆ ಮಾಡಿದ್ದ ಈ ಕಾರ್ಯಾಗಾರದಲ್ಲಿ ಕೂಪದೀರ ರಾಜಾ ನಂಜಪ್ಪ ಸೇರಿದಂತೆ ಗಣ್ಯರು ಹಾಜರಿದ್ದರು.