ಸೋಮವಾರಪೇಟೆ, ಮಾ. 1: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಚೌಡ್ಲು ಗ್ರಾಮದಲ್ಲಿ ನೂತನವಾಗಿ ರಚಿಸಲಾಗಿರುವ ಜೈ ಭಾರತ್ ಸ್ವ ಉದ್ಯೋಗ ಸ್ವಸಹಾಯ ಸಂಘವನ್ನು ಉದ್ಘಾಟಿಸಲಾಯಿತು.

ಸಂಘದ ಪ್ರಬಂಧಕರಾಗಿ ಶಶಿ, ಸಂಯೋಜಕ ಮಂಜುನಾಥ, ಕೋಶಾಧಿಕಾರಿಯಾಗಿ ಅಶೋಕ ಅವರುಗಳನ್ನು ನೇಮಿಸಲಾಯಿತು. ಚೌಡ್ಲು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸುನೀತ ಉಪಸ್ಥಿತರಿದ್ದು, ಸಂಘದ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು.