ಸುಂಟಿಕೊಪ್ಪ, ಮಾ. 1 : ಕಾಫಿ ತೋಟವೊಂದರಲ್ಲಿ ಅಪರಿಚಿತ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿರುವ ಲಕ್ಷ್ಮೀ ತೋಟದಲ್ಲಿ ಬುಧವಾರ ಮಧ್ಯಾಹ್ನದ ವೇಳೆ ಅಂದಾಜು 36 ವರ್ಷ ಪ್ರಾಯದ ವ್ಯಕ್ತಿಯೋರ್ವ ಸುಮಾರು 40 ಅಡಿ ಮರವನ್ನು ಏರಿ ತಾನು ಧರಿಸಿದ್ದ ಲುಂಗಿಯಿಂದಲೇ ಆತ್ಮಹತ್ಯೆಕೊಂಡಿದ್ದು, ಪಕ್ಕದ ತೋಟದಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಠಾಣೆಗೆ ತಿಳಿಸಿದ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮೃತ ದೇಹವನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

ವ್ಯಕ್ತಿಯ ಕುಟುಂಬಸ್ಥರು ಇದ್ದಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ 08276-26333 ಪೊಲೀಸರು ಕೋರಿಕೊಂಡಿದ್ದಾರೆ.