ಸೋಮವಾರಪೇಟೆ,ಫೆ.12: ಪ್ರಸಕ್ತ ವಿದ್ಯಮಾನಗಳಿಗೆ ಸ್ಪಂದಿಸುವ, ಭಾಗವಹಿಸುವ, ಸಕಾರಾತ್ಮಕ ವಿಚಾರಗಳನ್ನು ಮೈಗೂಢಿಸಿಕೊಳ್ಳುವ ಮೂಲಕ ಯುವಕರು ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಜೇಸಿ ಸಂಸ್ಥೆಯ ಅಂತರ್ರಾಷ್ಟ್ರೀಯ ತರಬೇತುದಾರರಾದ ಬೆಂಗಳೂರಿನ ನೇಹಾ ಹೇಳಿದರು.

ಜೇಸಿ ಸಂಸ್ಥೆ ವತಿಯಿಂದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ‘ಪರಿಣಾಮಕಾರಿ ಭಾಷಣ ಕಲೆ’ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಾಗಾರದಲ್ಲಿ ಜೇಸಿ ಅಧ್ಯಕ್ಷ ಕೆ.ಎ. ಪ್ರಕಾಶ್, ಜೇಸಿರೇಟ್ಸ್‍ನ ಅಧ್ಯಕ್ಷೆ ಮಾಯಾ ಗಿರೀಶ್, ಜೇಸಿ ಕಾರ್ಯದರ್ಶಿ ಎಂ.ಎ. ರುಬೀನಾ, ನಿಕಟಪೂರ್ವ ವಲಯಾಧಿಕಾರಿ ಕೆ.ಜೆ. ಗಿರೀಶ್, ಮಾಜಿ ಅಧ್ಯಕ್ಷರಾದ ಸುಬ್ರಮಣಿ, ಮಂಜುನಾಥ್, ಮನೋಹರ್, ತರಬೇತುದಾರ ತುಮಕೂರಿನ ದರ್ಶನ್ ಮತ್ತಿತರರು ಇದ್ದರು.