ಸೋಮವಾರಪೇಟೆ, ಫೆ.10: ಸೋಮವಾರಪೇಟೆ ಪುಷ್ಪಗಿರಿ ಜೇಸೀ ಸಂಸ್ಥೆ ವತಿಯಿಂದ ತಾ. 11ರಂದು (ಇಂದು) ಇಲ್ಲಿನ ಪತ್ರಿಕಾಭವನದಲ್ಲಿ ‘ಪರಿಣಾಮಕಾರಿ ಭಾಷಣ ಕಲೆ’ ವಿಷಯದ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಜೇಸೀ ಅಧ್ಯಕ್ಷ ಕೆ.ಎ. ಪ್ರಕಾಶ್ ತಿಳಿಸಿದರು.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೆ ತರಬೇತಿ ಕಾರ್ಯಾಗಾರ ನಡೆಯಲಿದ್ದು, ಜೇಸೀ ಸಂಸ್ಥೆಯ ಅಂತರ್ರಾಷ್ಟ್ರೀಯ ತರಬೇತುದಾರರಾದ ಬೆಂಗಳೂರಿನ ನೇಹಾ ಮತ್ತು ತುಮಕೂರಿನ ದರ್ಶನ್ ಅವರುಗಳು ತರಬೇತಿ ನೀಡಲಿದ್ದಾರೆ. ಮಾಹಿತಿಗಾಗಿ ಮೊ. 9743189965, 9591316475 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಾಶ್ ತಿಳಿಸಿದ್ದಾರೆ.