ಕೂಡಿಗೆ/ಸೋಮವಾರಪೇಟೆ, ಫೆ. 6: ಅಕ್ರಮವಾಗಿ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಶನಿವಾರಸಂತೆಯಿಂದ ಬಾಣಾವಾರದ ಮಾರ್ಗವಾಗಿ ಬೆಟ್ಟದಪುರಕ್ಕೆ ನಾಟಾಗಳನ್ನು ಸಾಗಿಸುತ್ತಿದ್ದ ಸಂದರ್ಭ ಆಲೂರು-ಸಿದ್ದಾಪುರ ಸಮೀಪದ ಆಲದ ಮರ ಜಂಕ್ಷನ್‍ನಲ್ಲಿ ಅರಣ್ಯಾಧಿಕಾರಿಗಳು ಆರೋಪಿಗಳಾದ ಶನಿವಾರಸಂತೆಯ ಧರ್ಮ ಮತ್ತು ರಾಜಶೇಖರ್ ಅವರುಗಳನ್ನು ವಶಕ್ಕೆ ಪಡೆದಿದ್ದಾರೆ.

ಲಾರಿ ಮತ್ತು ಭಾರೀ ಗಾತ್ರದ ಮಾವಿನ ಮರದ ನಾಟಾಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸುಮಾರು ರೂ. 3 ಲಕ್ಷ ಮೌಲ್ಯದ್ದು ಎಂದು ವಲಯ ಅರಣ್ಯಾಧಿಕಾರಿ ಎನ್. ಲಕ್ಷ್ಮಿಕಾಂತ್ ತಿಳಿಸಿದ್ದಾರೆ.

ಎ.ಸಿ.ಎಫ್. ಚಿಣ್ಣಪ್ಪ ಮಾರ್ಗದರ್ಶನದಲ್ಲಿ ಡಿ.ಆರ್.ಎಫ್.ಓ. ಮಹದೇವ್ ನಾಯಕ್, ಅರಣ್ಯ ರಕ್ಷಕ ಹೆಚ್.ಪಿ.ರಾಜಣ್ಣ, ವೀಕ್ಷಕ ವಿಜಯ್, ವಾಹನ ಚಾಲಕ ಸಂದೀಪ್ ಭಾಗವಹಿಸಿದ್ದರು.