ಕುಶಾಲನಗರ, ಜ. 30 : ಕುಶಾಲನಗರ ನೆಹರೂ ಬಡಾವಣೆಯಲ್ಲಿರುವ ಶ್ರೀ ಬಲಮುರಿ ಸಿದ್ದಿವಿನಾಯಕ ದೇವಸ್ಥಾನದ 20ನೇ ವಾರ್ಷಿಕೋತ್ಸವ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಸೋಮವಾರ ಮಹಾಗಣಪತಿ ಹೋಮ ನಂತರ ಅಭಿಷೇಕ, ಮಹಾಮಂಗಳಾರತಿ, ಅನ್ನದಾನ ಕಾರ್ಯಕ್ರಮ ನಡೆಯಿತು. ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಂಕೃತ ಮಂಟಪದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ಜರುಗಿತು.

ಪ್ರಧಾನ ಅರ್ಚಕರಾದ ಎಸ್.ಎಲ್.ನಾಗರಾಜಭಟ್ ನೇತೃತ್ವದ ಅರ್ಚಕರ ತಂಡ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷರಾದ ಡಿ.ಜೆ.ರೇಣುಕುಮಾರ್, ಉಪಾಧ್ಯಕ್ಷರಾದ ಜಿ.ಶಿವರಾಂ, ಕಾರ್ಯದರ್ಶಿ ಎಸ್.ಸಿ. ಗೋವಿಂದ ರಾಜ್, ಖಜಾಂಚಿ ರಾಮಕೃಷ್ಣಾಚಾರ್ ಮತ್ತಿತರರು ಇದ್ದರು.