ಮಡಿಕೇರಿ, ಜ. 28: ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಉಡುದೋಳಿರ ಕುಟುಂಬಸ್ಥರ ಮನೆಯ ಬಳಿ ಪಂಚಾಯಿತಿ ಅನುದಾನದಿಂದ ನಿರ್ಮಿಸಲಾಗಿರುವ ಕಾಂಕ್ರಿಟ್ ರಸ್ತೆಯನ್ನು ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಪುದಿಯತಂಡ ಸುಭಾಷ್ ಸೋಮಯ್ಯ ಉದ್ಘಾಟಿಸಿದರು.

ಈ ಸಂದರ್ಭ ಗಾಳಿಬೀಡು ಪಂಚಾಯಿತಿ ಉಪಾಧ್ಯಕ್ಷೆ ಬದಲೇರ ರಾಣಿ ಮುತ್ತಣ್ಣ, ಸದಸ್ಯರಾದ ಎಂ.ಡಿ. ಸುಭಾಷ್ ಆಳ್ವ, ಎನ್.ಕೆ. ಜಯಲಕ್ಷ್ಮಿ, ಕುಮಾರಿ, ಗ್ರಾಮಸ್ಥರಾದ ಅನಂತಕುಮಾರ್, ಕುಶಾಲಪ್ಪ, ಕೊಂಬಾರನ ಗಣಪತಿ, ಲಿಂಗರಾಜು, ಜಗದೀಶ್, ನಾಣಯ್ಯ ಲಿಂಗಪ್ಪ, ವಾಣಿ, ಪಾಂಡೀರ ಸುಬ್ರಮಣಿ ಹಾಗೂ ಪಂಚಾಯಿತಿ ಮಾಜಿ ಅಧ್ಯಕ್ಷೆ ದೇವಕಿ ರೈ ಹಾಜರಿದ್ದರು.