ಮಡಿಕೇರಿ, ಜ. 9: ಕೊಡವ ನ್ಯಾಷನಲ್ ಕೌನ್ಸಿಲ್‍ನ ಸುಮಾರು 26 ವರ್ಷಗಳ ಹೋರಾಟದ ಫಲವಾಗಿ ಆರಂಭಗೊಂಡ ಕೊಡವ ಕುಲಶಾಸ್ತ್ರ ಅಧ್ಯಯನವನ್ನು ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆ ಸ್ಥಗಿತಗೊಳಿಸಿದ್ದು, ಇದನ್ನು ಪುನರಾರಂಭಿಸುವಂತೆ ನಾಪೆÇೀಕ್ಲು ಕೊಡವ ಸಮಾಜ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಸಿಎನ್‍ಸಿ ಬೇಡಿಕೆ ಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದರ ಫಲವಾಗಿ ಸಮಾಜ ಕಲ್ಯಾಣ ಇಲಾಖೆ ಮೈಸೂರು ಬುಡಕಟ್ಟು ಅಧ್ಯಯನ ಸಂಸ್ಥೆಯ ಮೂಲಕ ಅಧ್ಯಯನವನ್ನು ಆರಂಭಿಸಿತ್ತಾದರೂ, ಒಂದೇ ತಿಂಗಳಿನಲ್ಲಿ ಮುಖ್ಯಮಂತ್ರಿಗಳು ಮೌಖಿಕ ಆದೇಶದಿಂದ ದಿಢೀರ್ ಆಗಿ ಸ್ಥಗಿತಗೊಂಡಿತು. ಇದು ಕೆಲವು ಜಾತಿ ಅಥವಾ ರಾಜಕೀಯ ಷಡ್ಯಂತ್ರದಿಂದ ನಡೆದಿದೆ ಎನ್ನುವ ಸಂಶಯವಿದೆ ಯೆಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಯನವನ್ನು ಪÀÅನರಾ ರಂಭಿಸುವ ಮೂಲಕ ಕೊಡವರಿಗೆ ಸಿಗಬೇಕಾದ ಸಂವಿಧಾನದ ಹಕ್ಕುಗಳನ್ನು ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು. ಆ ಮೂಲಕ ಕೊಡಗಿನ ಮೂಲ ನಿವಾಸಿ ಕೊಡವರು ವಲಸೆ ಹೋಗುವದನ್ನು ತಪ್ಪಿಸಬೇಕೆಂದು ರಮೇಶ್ ಚಂಗಪ್ಪ ಒತ್ತಾಯಿಸಿದರು. ಕೊಡವರ ಭೂಮಿಯ ಹಕ್ಕು, ರಾಜಕೀಯ ಅಸ್ತಿತ್ವ, ದೇವನೆಲೆಗಳು ಮತ್ತು ಪಾರಂಪರಿಕ ಹಕ್ಕುಗಳು ಶಾಶ್ವತ ವಾಗಿ ಉಳಿಯ ಬೇಕಾದರೆ ಕೊಡವ ರನ್ನು ಬುಡಕಟ್ಟು ಜನಾಂಗವೆಂದು ಗುರುತಿಸಿ ಹಕ್ಕುಗಳನ್ನು ಖಾತ್ರಿ ಪಡಿಸುವ ಅನಿವಾರ್ಯತೆ ಇದೆ. ಸರ್ಕಾರ ನಿರ್ಲಕ್ಷ್ಯ ತೋರಿದರೆ ಅತೀ ಸಣ್ಣ ಸಮುದಾಯ ನಶಿಸುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟರು. ಈ ಬೇಡಿಕೆ ಘೋಷಣೆ ಯಾಗದಿದ್ದಲ್ಲಿ ಕೊಡವರ ಹಕ್ಕನ್ನು ಹತ್ತಿಕ್ಕಿ ಗೇಲಿ ಮಾಡಿದಂತಾಗಲಿದೆ ಎಂದು ರಮೇಶ್ ಚಂಗಪ್ಪ ಅಭಿಪ್ರಾಯಪಟ್ಟರು. ಅಧ್ಯಯನವನ್ನು ಪÀÅನರಾರಂಭಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವದೆಂದು ಇದೇ ಸಂದರ್ಭ ತಿಳಿಸಿದರು. ನಿರ್ದೇಶಕ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಅವರು ಸರ್ಕಾರದ ಮೇಲೆ ಪ್ರಭಾವ ಬೀರಿದ ಪರಿಣಾಮ ಅಧ್ಯಯನ ಸ್ಥಗಿತಗೊಂಡಿದೆ ಎಂದು ಆರೋಪಿ ಸಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಮಾಳೆಯಂಡ ಪೆÇನ್ನಣಿ ಅಯ್ಯಪ್ಪ, ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ, ಕಾರ್ಯದರ್ಶಿ ಮಂಡೀರ ರಾಜಪ್ಪ ಹಾಗೂ ನಿರ್ದೇಶಕ ಕಾಟುಮ ಣಿಯಂಡ ಉಮೇಶ್ ಉಪಸ್ಥಿತರಿದ್ದರು.