ಸುಂಟಿಕೊಪ್ಪ, ಜ. 4: ತಾ. 26ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲಿರುವ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಕೊಡಗಿನ ಸುಂಟಿಕೊಪ್ಪ ನಿವಾಸಿ ಸ್ಪಂದನಾ ಸುರೇಶ್ ಅವರು ಸಾಂಸ್ಕøತಿಕ ಮತ್ತು ನೃತ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿ.ಇ. ವ್ಯಾಸಂಗ ಮಾಡುತ್ತಿರುವ ಈಕೆ ಇಲ್ಲಿನ ಸಂತಮೇರಿ ಶಾಲೆ, ಮಡಿಕೇರಿ ಕೊಡಗು ವಿದ್ಯಾಲಯ, ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದಾಳೆ. ಸುಂಟಿಕೊಪ್ಪದ ಗುತ್ತಿಗೆದಾರ ಕೆ.ಸುರೇಶ್ ಕುಮಾರ್, ಹಾಗೂ ಉಪನ್ಯಾಸಕಿ ಪುಷ್ಪಲತಾ ಪುತ್ರಿ.