ಕುಶಾಲನಗರ, ಡಿ. 28: ಕರ್ನಾಟಕ ರಾಜ್ಯ ಪಾನೀಯ ನಿಗಮದ ಆವರಣದಲ್ಲಿ ಅವಧಿ ಮೀರಿದ ಮದ್ಯವನ್ನು ನಾಶಪಡಿಸುವ ಕಾರ್ಯಕ್ರಮ ನಡೆಯಿತು. ಕುಶಾಲನಗರದ ಮುಖ್ಯ ರಸ್ತೆಯಲ್ಲಿರುವ ಕಛೇರಿಯ ಹಿಂಭಾಗ 172 ಕೇಸ್ ಪ್ರಮಾಣದ ವಿಸ್ಕಿ, ಬ್ರಾಂದಿ, ಬ್ರೀಜರ್, 15 ಬಾಟಲಿ ವೈನ್, 40 ಕೇಸ್ ಬಿಯರ್ ಬಾಟಲಿಗಳನ್ನು ನಾಶಪಡಿಸಲಾಯಿತು.
ಅಬಕಾರಿ ನಿರೀಕ್ಷಕಿ ಚೈತ್ರಾ ಅವರ ನೇತೃತ್ವದಲ್ಲಿ ಅಧಿಕಾರಿಗಳಾದ ಗಣೇಶ್, ಎಸ್.ಕೃಷ್ಣ, ಪಾನೀಯ ನಿಗಮದ ಶಾಖಾ ವ್ಯವಸ್ಥಾಪಕ ವಿ.ಎಂ.ಕದಮ್ ಇದ್ದರು.