ಮಡಿಕೇರಿ, ಡಿ. 19: ಹಿರಿಯ ವಾರ್ತಾ ವಾಚಕ, ನಿರೂಪಕ ಚೋವಂಡ ಬೋಪಯ್ಯ ಅವರಿಗೆ ‘ವಿಶ್ವ ಕನ್ನಡಿಗ’ ಪ್ರಶಸ್ತಿ ದೊರೆತಿದೆ. ಇತ್ತೀಚೆಗೆ ದುಬೈನ ಜಮೈಕಾಸ್ ಜೆಎಸ್‍ಎಸ್ ಅಂತರ್ರಾಷ್ಟ್ರೀಯ ಶಾಲಾ ಸಭಾಂಗಣದಲ್ಲಿ ನಡೆದ ವಿಶ್ವ ಕನ್ನಡ ನುಡಿಸಿರಿ-2017 ಕಾರ್ಯಕ್ರಮದಲ್ಲಿ ಬೋಪಯ್ಯ ಅವರಿಗೆ ಪ್ರಶಸ್ತಿಯನ್ನು ಜೆಡಿಯು ಅಧ್ಯಕ್ಷ ಮಹಿಮಾ ಪಟೇಲ್ ಮತ್ತಿತರ ಗಣ್ಯರು ವಿತರಿಸಿ ಗೌರವಿಸಿದರು.

ದುಬೈನ ಉದ್ಯಮಿಗಳಾದ ಡಾ. ಬಿ.ಆರ್. ಶೆಟ್ಟಿ, ಶಾಸಕ ಶರವಣ, ಚಿತ್ರನಟ ವಿಜಯ ರಾಘವೇಂದ್ರ ಮತ್ತಿತರರು ಇದ್ದರು. ಕುಣಿಗಲ್‍ನ ಅಂಕನಹಳ್ಳಿ ಮಠದ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಶ್ರೀ ಗುರು ಬಸವ ಮಹಾಸ್ವಾಮೀಜಿ, ಬೆಟ್ಟದಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.