ವೀರಾಜಪೇಟೆ, ಡಿ. 1: ವ್ಯೆಕ್ತಿಯೊಬ್ಬರಿಂದ ವ್ಯಾಪಾರಕ್ಕೆ ಸಂಭಂದಿಸಿದಂತೆ ಕೈ ಸಾಲವಾಗಿ ಹಣ ಪಡೆದುಕೊಂಡು ಹಿಂದಿರುಗಿಸದ ಹಿನೆÀ್ನಲೆಯಲ್ಲಿ ವ್ಯಕ್ತಿಯೋರ್ವರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ವೀರಾಜಪೇಟೆ ತಾಲೂಕಿನ ಕಾಕೋಟುಪರಂಬುವಿನ ನಿವಾಸಿಯಾದ ಭಂಡಾರಿ ದೊಮ್ಮಣ್ಣ ಅವರ ಪುತ್ರ ಪ್ರಕಾಶ್ ರ್ಯೆ ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ, ಪ್ರಕಾಶ್ ವ್ಯಾಪಾರದ ಉದ್ದೇಶದಿಂದ ಬೇಟೊಳಿ ಪಂಚಾಯಿತಿಯ ಅರ್ಜಿ ಗ್ರಾಮದ ನಿವಾಸಿಯಾದ ಅಣ್ಣಪ್ಪ ಅವರ ಮಗ ದಿನೇಶ್ ಅವರಿಂದ 2016 ರಲ್ಲಿ ಚೆಕ್ ನೀಡಿ ರೂ. 1,00,000 ನಗದನ್ನು ಸಾಲವಾಗಿ ಪಡೆದುಕೊಂಡು ಹಿಂತಿರುಗಿಸಿರಲಿಲ್ಲ. ಈ ಬಗ್ಗೆ ದಿನೇಶ್ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ರೂ. 1 ಲಕ್ಷ ಹಿಂತಿರುಗಿಸುವದರೊಂದಿಗೆ ರೂ. 5 ಸಾವಿರ ದಂಡ ಪಾವತಿಸಲು ಆದೇಶಿಸಲಾಗಿದೆ.