ಮಡಿಕೇರಿ, ನ. 29: ಬೊಳ್ಳುಮಾಡು ಗ್ರಾಮದ ತೋಟವೊಂದರ ಕಾರ್ಮಿಕ ಅಂಬಾಡಿ ಎಂಬವರ ಪುತ್ರಿ 16ರ ಬಾಲಕಿಯನ್ನು ಯಾರೋ ಅಪಹರಿಸಿರುವ ಶಂಕೆಯೊಂದಿಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾ. 16ರಂದು ಸಂಜೆ ಬಾಲಕಿಯು ಪಕ್ಕದ ಮನೆಗೆ ಹೋಗಿ ಬರುವದಾಗಿ ಹೆತ್ತವರಿಗೆ ತಿಳಿಸಿ ತೆರಳಿದಾಕೆ ಎಲ್ಲಿಯೂ ಇದುವರೆಗೆ ಪತ್ತೆಯಾಗಿಲ್ಲವೆಂದು ಪೋಷಕರು ನೀಡಿರುವ ಪುಕಾರು ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.