ಮಡಿಕೇರಿ, ನ. 22: ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕ್ಷೋಭೆ, ಅಪನಂಬಿಕೆಗಳನ್ನು ದೂರಮಾಡಿ ಪರಸ್ಪರ ವಿಶ್ವಾಸ, ಸ್ನೇಹ ಸೌಹಾರ್ದತೆಗಳ್ನು ಮೂಡಿಸುವ ಚಿಂತನೆಯಡಿ ಮಾನವ ಬಂಧುತ್ವ ವೇದಿಕೆ ವತಿಯಿಂದ ತಾ. 24 ರಂದು ಮೈಸೂರಿನಿಂದ ಆರಂಭÀಗೊಳ್ಳುವ ‘ಮೌಢ್ಯ ವಿರೋಧಿ ಜಾಗೃತಿ ಜಾಥಾ’ ಅಂದು ಸಂಜೆ ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಲಿದೆ ಎಂದು ವೇದಿಕೆಯ ಕೊಡಗು ಜಿಲ್ಲಾ ಪದಾಧಿಕಾರಿ ನೆರವಂಡ ಉಮೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಮಾನವ ಬಂಧುತ್ವ ಭಾವೈಕ್ಯತೆಗೆ ಹೆಸರಾಗಿದ್ದ ಕೊಡಗಿನಲ್ಲಿ ಕೂಡ ಶಾಂತಿ ಕದಡುವ, ಪರಸ್ಪರ ಸಂಶಯದಿಂದ ನೋಡುವ ಕಳವಳಕಾರಿ ವಾತಾವರಣ ನಿರ್ಮಾಣವಾಗುತ್ತಿದೆ. ಇದನ್ನು ದೂರ ಮಾಡುವ ಚಿಂತನೆಯಡಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಸ್ಥಾಪಿತ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಘಟಕವನ್ನು ತಾ. 24 ರಂದು ಅಸ್ತಿತ್ವಕ್ಕೆ ತರಲಾಗುತ್ತದೆ ಎಂದÀರು.

ವೇದಿಕೆಯಿಂದ ರಾಜ್ಯದ ಉದ್ದಗಲಕ್ಕೂ ಗೌತಮ ಬುದ್ಧ, ಬಸವಣ್ಣ, ಡಾ. ಅಂಬೆÉೀಡ್ಕರ್, ಪೆರಿಯಾರ್ ಮತ್ತು ಶ್ರೀನಾರಾಯಣ ಗುರುಗಳ ಹೆಸರಿನಲ್ಲಿ ಜಾಥಾ ನಡೆಯಲಿದೆ. ‘ಮಾನವೀಯತೆಯೆ ನಮ್ಮ ಧರ್ಮ, ಸಂವಿಧಾನವೇ ನಮ್ಮ ಧರ್ಮಗ್ರಂಥ’ ಘೋಷಣೆಯಡಿ ಮೈಸೂರಿನಿಂದ ಆಗಮಿಸುವ ಜಾಥಾವನ್ನು ನಗರದ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿ ಸ್ವಾಗತಿಸಲಾಗುತ್ತದೆ.

ಬಳಿಕ ಸಂಜೆ 4 ಗಂಟೆಗೆ ಕಾವೇರಿ ಕಲಾಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಾಹಿತಿಗಳು ಹಾಗೂ ವಿಚಾರವಾದಿಗಳಾದ ವಕೀಲ ವಿದ್ಯಾಧರ್ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಾಪಂಡ ಮುತ್ತಪ್ಪ ಪಾಲ್ಗೊಳ್ಳಲಿದ್ದಾರೆ, ತಾನು ದಿಕ್ಸೂಚಿ ಭಾಷಣ ಮಾಡುವದಾಗಿ ನೆರವಂಡ ಉಮೇಶ್ ತಿಳಿಸಿದರು.

ಮುಂದಿನ ಡಿ. 6 ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಮೌಢ್ಯ ವಿರೋಧಿ ಸಂಕಲ್ಪ ಸಮಾವೇಶದಲ್ಲಿ ಜಿಲ್ಲೆಯ ಸುಮಾರು 200 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆ ಪದಾಧಿಕಾರಿಗಳಾದ ಬಿ.ಎಸ್. ರಮಾನಾಥ್ ಕರಿಕೆ, ಕೆ.ಎಂ. ಕುಂಞÂ ಅಬ್ದುಲ್ಲ, ಸುರೇಶ್ ಟಿ.ಇ., ನಗರಸಭಾ ಸದಸ್ಯರಾದ ಸುರೇಶ್ ಆಚಾರ್ಯ ಹಾಗೂ ಸುನಿಲ್ ಎನ್.ಸಿ. ಉಪಸ್ಥಿತರಿದ್ದರು.