ಮಡಿಕೇರಿ, ಸೆ. 18: ಮಾಲಂಬಿ ಸಮೀಪದ ಹೊಸುಗುತ್ತಿ ನಿವಾಸಿ ಕೆ.ಎಂ. ಮುತ್ತಪ್ಪ ಎಂಬವರ ಪುತ್ರ ಕೆ.ಎಂ. ಚೇತನ್ (22) ಎಂಬಾತ ತಾ. 10 ರಿಂದ ನಾಪತ್ತೆಯಾಗಿರುವದಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಸುಂದರ ನಗರದ ಕಾಫಿ ಕ್ಯೂರಿಂಗ್ ವಕ್ರ್ಸ್‍ವೊಂದರಲ್ಲಿ ಕೆಲಸದಲ್ಲಿದ್ದು, ತಾ. 10 ರಂದು ಹಗಲು 11 ಗಂಟೆಯಿಂದ ಕಾಣೆಯಾಗಿರುವದಾಗಿ ದೂರಿನಲ್ಲಿ ತಿಳಿಸಲಾಗಿದೆ. ಯುವಕನ ಸುಳಿವು ಲಭಿಸಿದರೆ ಪೊಲೀಸ್ ಕಂಟ್ರೋಲ್ ರೂಂ 08272-228330ಗೆ ಸಂಪರ್ಕಿಸಲು ಕೋರಲಾಗಿದೆ.