ಮಡಿಕೇರಿ, ಸೆ. 13: ಭಾನುವಾರ ರಾತ್ರಿ ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯ ಕ್ಷ-ಕಿರಣ (ಎಕ್ಸರೆ) ಸಿಬ್ಬಂದಿಯೊಬ್ಬರ ಮೇಲೆ ಚಾಮುಂಡೇಶ್ವರಿ ನಗರದ ಕೆಲವರು ಗಲಾಟೆ ಮಾಡಿದ್ದಲ್ಲದೆ ಸಂಜು ಎಂಬಾತ ಹಲ್ಲೆ ನಡೆಸಿರುವ ಕುರಿತು ತಿಳಿದುಬಂದಿದೆ.

ಸುಮಾರು 11 ಗಂಟೆ ರಾತ್ರಿಯಲ್ಲಿ ರೋಗಿಯೊಬ್ಬರ ಎಕ್ಸರೆ ತೆಗೆಯಲು ಸಿಬ್ಬಂದಿಗೆ ಬೆದರಿಸಿದ್ದಲ್ಲದೆ, ಕರ್ತವ್ಯಕ್ಕೆ ಅಡ್ಡಿಪಡಿಸಿ ಥಳಿಸಿರುವದಾಗಿ ರಕ್ಷಿತ್ ಎಂಬವರು ನಗರ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.