ಸುಂಟಿಕೊಪ್ಪ, ಆ. 21: ಗರಗಂದೂರಿನ ಆಲ್‍ನೂರ್ ವೇಲ್ಪೇರ್ ಕಮಿಟಿವತಿಯಿಂದ ತಾ. 22 ಹಾಗೂ 23 ರಂದು ಬಡ ಹೆಣ್ಣು ಮಗಳ ವಿವಾಹ ಕಾರ್ಯಕ್ರಮ ದ್ಸಿಕ್ರ್ ದುಃಆಬುರ್ದಾ ಮಜೆಲಿಸ್ ಕಾರ್ಯಕ್ರಮವು ಗರಗಂದೂರಿನಲ್ಲಿ ನಡೆಯಲಿದೆ.

ತಾ. 22 ರಂದು ರಾತ್ರಿ 8 ಗಂಟೆಗೆ ಕಾರ್ಯಕ್ರಮವನ್ನು ಗರಗಂದೂರಿನ ಖತೀಬ್‍ರಾದ ಬಹು ಹಂಝ ಸಖಾಫಿ ನೇರವೇರಿಸಲಿದ್ದು ಕರ್ನಾಟಕ ಮುಸ್ಲಿಂ ಜಮಾಯತ್ ಕೌನ್ಸಿಲ್‍ನ ಕಾರ್ಯದರ್ಶಿ ಅಬು ಸುಫಿಯಾನ್ ಮದನಿ ಮುಖ್ಯ ಭಾಷಣ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಿಹಾಬುದ್ದೀನ್ ಸಖಾಫಿ ಆಲ್ ಹೈದ್ರೋಸಿ ತಂಙಳ್ ವಹಿಸಲಿರುವರು.

ತಾ. 23 ರಂದು ನಿಖಾಹ್ ಮತ್ತು ಸಮಾರೋಪ ಸಮಾರಂಭ ವನ್ನು ಎಮ್ಮಮಾಡುವಿನ ಅಸ್ಸಯ್ಯದ್ ಇಲ್ಯಾಸ್ ಖಾಮಿಲ್ ಸಖಾಫಿ ಆಲ್ ಹೈದ್ರೋಸ್ ವiಡವೂರ್ ಉದ್ಘಾಟಿಸಲಿದ್ದು, ಮುಖ್ಯ ಭಾಷಣವನ್ನು ಕಳಸದ ನೌಫಲ್ ಸಖಾಫಿ ಮಾಡಲಿರುವರು ನಿಖಾ ಮತ್ತು ದು:ಆ ನೇತೃತ್ವವನ್ನು ಮಡವೂರಿನ ಅಸ್ಸಯದ್ ಇಲ್ಯಾಸ್ ಖಾಮಿಲ್ ಸಖಾಫಿ ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.