ಗೋಣಿಕೊಪ್ಪಲು, ಏ. 18: ಬಾಳೆಲೆಯಲ್ಲಿ ತಾ. 24 ರಂದು ಆರಂಭಗೊಳ್ಳಲಿರುವ ಅಳಮೇಂಗಡ ಕ್ರಿಕೆಟ್ ಕಪ್ನಲ್ಲಿ 220 ತಂಡಗಳು ಪಾಲ್ಗೊಳ್ಳುತ್ತಿವೆ ಎಂದು ಅಳಮೇಂಗಡ ಕ್ರಿಕೆಟ್ ಕಪ್ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ತಿಳಿಸಿದ್ದಾರೆ. ಗೋಣಿಕೊಪ್ಪ ಪ್ರೆಸ್ ಕ್ಲಬ್ನಲ್ಲಿ ಟೈಸ್ ಬಿಡುಗಡೆಗೊಳಿಸಿ ಮಾತನಾಡಿ, 18 ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ಸಿದ್ಧತೆಗಳು ನಡೆದಿವೆ. ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪ್ರತ್ಯೇಕವಾಗಿ ಪಂದ್ಯಗಳು ನಡೆಯಲಿವೆ. ತಾ. 24 ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಅಂದು ಬಾಳೆಲೆ ಇಲೆವೆನ್ ಹಾಗೂ ಅಳಮೇಂಗಡ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ನಂತರ ಅಳಮೇಂಗಡ ಕ್ರಿಕೆಟ್ ಕಪ್ನ ಒಂದು ಪಂದ್ಯ ನಡೆಯಲಿದೆ ಎಂದರು.
ಬಿದ್ದಾಟಂಡ ಹಾಕಿ ನಮ್ಮೆಯಲ್ಲಿ ತಂಡಗಳು ಕ್ರಿಕೆಟ್ ಕಪ್ನಲ್ಲಿ ಪಾಲ್ಗೊಳ್ಳಲಿರುವ ಕುಟುಂಬ ತಂಡಗಳು ಕ್ರಿಕೆಟ್ನಲ್ಲಿಯೂ ಪಾಲ್ಗೊಳ್ಳುವ
(ಮೊದಲ ಪುಟದಿಂದ) ಕಾರಣ ತಂಡಗಳಿಗೆ ಘರ್ಷಣೆಯಾಗದಂತೆ ಟೈಸ್ ಬಿಡುಗಡೆ ಮಾಡಲಾಗಿದೆ. 2008 ರಲ್ಲಿ ಹಾಕಿ ಕಪ್ನ್ನು ಯಶಸ್ವಿಯಾಗಿ ಅಳಮೇಂಗಡ ಕುಟುಂಬ ಯಶಸ್ವಿಯಾಗಿ ನಡೆಸಿತು. ಇದೇ ಯಶಸ್ವಿಯನ್ನು ಕ್ರಿಕೆಟ್ ಆತಿಥ್ಯದಲ್ಲಿ ಉಳಿಸಿಕೊಳ್ಳಲಾಗುವದು. ಉದ್ಘಾಟನೆಯಂದು ಬಾಳೆಲೆ ಗಣಪತಿ ಗುಡಿಯಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಮೈದಾನದಲ್ಲಿ ಸಮಾಗಮಗೊಂಡು ಸಭಾ ಕಾರ್ಯಕ್ರಮ ನಡೆಸಲಾಗುವದು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕೊಡವ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕಾರ್ಸನ್ ಕಾರ್ಯಪ್ಪ, ಅಳಮೇಂಗಡ ಕುಟುಂಬದ ಹಿರಿಯರಾದ ಪೊನ್ನಪ್ಪ, ಕುಟುಂಬದ ಅಧ್ಯಕ್ಷ ಅಳಮೇಂಗಡ ವಿವೇಕ್, ಬಾಳೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.
ಕ್ರಿಕೆಟ್ ಕಪ್ ಮಾಧ್ಯಮ ಸಂಚಾಲಕ ರಮೇಶ್ ಮಾತನಾಡಿ, ದಾಖಲೆಗಾಗಿ ಕುಟುಂಬ ತಂಡಗಳನ್ನು ಸೇರಿಸುವ ಪ್ರಯತ್ನ ನಾವು ಮಾಡಿಲ್ಲ. ಬದಲಾಗಿ ಸ್ವಇಚ್ಛೆಯಿಂದ ಬಂದ ತಂಡಗಳನ್ನು ಮಾತ್ರ ಸೇರಿಸಿದ್ದೇವೆ. ದಾಖಲೆಗಳಿಗಿಂತ ನಾವು ಗುಣಮಟ್ಟದ ಕ್ರಿಕೆಟ್ಗೆ ಆಧ್ಯತೆ ನೀಡಿದ್ದೇವೆ. ಇದರಂತೆ ಉತ್ತಮ ತಂಡಗಳು ಪಾಲ್ಗೊಳ್ಳುತ್ತಿವೆ. ಎಲ್ಲಾ ತಂಡಗಳಿಗೂ ಹೆಚ್ಚಿನ ನಿಗದಿತ ಓವರ್ಗಳ ಪಂದ್ಯಗಳನ್ನು ಆಡಿಸುವ ಚಿಂತನೆಯಲ್ಲಿದ್ದೇವೆ ಎಂದರು.
ಕ್ರಿಕೆಟ್ ಕಪ್ನಲ್ಲಿ ಒಂದು ದಿನ ವಿರಾಮದ ದಿನವಾಗಿದೆ. ಮೇ 20 ರಂದು ವಿರಾಮದ ನಂತರ ಮೇ 21 ರಂದು ಅಂತಿಮ ಹಣಾಹಣಿ ನಡೆಯಲಿದೆ. ಉದ್ಘಾಟನಾ ದಿನದಂದು ಕೊಡವ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿದೆ ಎಂದರು.
ಕುಟುಂಬದ ಅಧ್ಯಕ್ಷ ವಿವೇಕ್ ಅಯ್ಯಪ್ಪ ಮಾತನಾಡಿ, ಸಮಾರೋಪ ದಿನದಂದು ಬಾಲಿವುಡ್ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಸುವ ಚಿಂತನೆ ಇದೆ ಎಂದರು.
ಕಾರ್ಯದರ್ಶಿ ಮೋಹನ್ ಚೆಂಗಪ್ಪ ಮಾತನಾಡಿ, ಈಗಾಗಲೇ ನಾಲ್ಕು ಕಂಪೆನಿ ಕ್ರಿಕೆಟ್ ನಡೆಸಲು ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದೆ. ಕ್ರೀಡಾಭಿಮಾನಿ ಚೇರಂಡ ಕಿಶನ್ ನಮಗೆ ಬೆಂಬಲವಾಗಿ ನಿಂತಿದ್ದಾರೆ ಎಂದರು.