ಚೆಟ್ಟಳ್ಳಿ, ಏ. 18: ಚೆಟ್ಟಳ್ಳಿಯ 300 ವರ್ಷಗಳ ಹಿಂದಿನ ಇತಿಹಾಸ ವಿರುವ ಶ್ರೀಮಂಗಲ ಭಗವತಿ ದೇವಾಲಯದ ಜೀರ್ಣೊದ್ಧಾರ ಕಾರ್ಯ ನಡೆಯುತ್ತಿದ್ದು, ದೇವಾಲಯದ ಸುತ್ತಲು ಪೌಳಿ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಯಿತು.
ಬಾಲಾಲಯದಲ್ಲಿ ಪ್ರತಿಷ್ಠಾಪಿಸಿರುವ ಭಗವತಿ, ಗಣಪತಿ ಹಾಗೂ ಪಾಲಕ ಕೇತುರಪ್ಪರಿಗೆ ಪೂಜೆ ಸಲ್ಲಿಸಿ ದೇವಾಲಯದ ತಕ್ಕಮುಖ್ಯಸ್ಥ ಮುಳ್ಳಂಡ ಗಣಪತಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮುಳ್ಳಂಡ ತಿಮ್ಮಯ್ಯ, ಪುತ್ತರಿರ ಕುಟುಂಬದ ಪಟ್ಟೆದಾರ ಪುತ್ತರಿರ ಎಂ. ಬಿದ್ದಪ್ಪ ಹಾಗೂ ಊರಿನವರು ಸೇರಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಈರಳೆ ಭಗವತಿ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪೊರಿಮಂಡ ದಿನಮಣಿ ಪೂವಯ್ಯ, ಊರಿನ ಹಿರಿಯರು, ಕಿರಿಯರು ಹಾಗೂ ಮಹಿಳೆಯರಿದ್ದು ದೇವರ ಪ್ರಸಾದವನ್ನು ಸ್ವೀಕರಿಸಿದರು.