ವೀರಾಜಪೇಟೆ, ಏ. 18: ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗಮರೂರಿನ ಸುತ್ತ ಮುತ್ತಲಿನ ಕೃಷಿ ಫಲಾನುಭವಿಗಳಿಗೆ ಇಂದು ಸುಣ್ಣದ ಚೀಲಗಳನ್ನು ವಿತರಿಸಲಾಯಿತು. ಕಡಂಗ ಗ್ರಾಮದ ಮಾರಿಕಮ್ಮ ಯುವಕ ಸಂಘದ ಕಟ್ಟಡದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಮುಕ್ಕಾಟೀರ ಕಾವೇರಮ್ಮ, ಮಾರಿಕಮ್ಮ ಸಂಘದ ಅಧ್ಯಕ್ಷ ಬಲ್ಟಿಕಾಳಂಡ ರಂಜಿ ಮಾದಪ್ಪ, ಕಾಂಗೀರ ಸತೀಶ್, ಮಂಡೇಪಂಡ ರೋಷನ್, ಎಂ. ಜಗದೀಶ್, ಕಂಡ್ರತಂಡ ಸುಬ್ಬಯ್ಯ, ಬಲ್ಯಂಡ ಕುಟ್ಟಪ್ಪ, ಕೋದಂಡ ಸುಬ್ಬಯ್ಯ ಉಪಸ್ಥಿತರಿದ್ದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಮೇಗೌಡ ನಿರ್ದೇಶನದಂತೆ ಒಂದು ಎಕರೆ ಭೂಮಿಗೆ ತಲಾ 20 ಚೀಲಗಳಂತೆ ಸುಣ್ಣ ವಿತರಿಸಲಾಯಿತು. ಸುಣ್ಣದ ವಿತರಣೆಯಲ್ಲಿ ಕೃಷಿಕರು ಅಧಿಕ ಸಂಖ್ಯೆಯಲ್ಲಿದ್ದರು.