ತಮ್ಮ ಮನೆಯವರ ಹುಟ್ಟುಹಬ್ಬದ ದಿನಾಂಕ ಮರೆತರೂ ‘ಶಕ್ತಿ’ಯ ಹುಟ್ಟುಹಬ್ಬವನ್ನು ಕೊಡಗಿನ ಆತ್ಮೀಯ ಜನತೆ ಮರೆಯರು. ‘ಶಕ್ತಿ’ಯ ಆತ್ಮೀಯ ಬಳಗ ಈ ಸಂದರ್ಭ ಕರೆಮಾಡಿ ಶುಭಾಶಯ ಕೋರಿದೆ. ಮಕ್ಕಳು ಚಿತ್ರಬಿಡಿಸಿ ಕಳುಹಿಸಿದ್ದಾರೆ. ಹಲವರು ಲೇಖನ, ಕವನಗಳ ಮೂಲಕ ಮನ ಮಿಡಿತವನ್ನು ಹಂಚಿಕೊಂಡಿದ್ದಾರೆ. ಸ್ಥಳಾಭಾವದಿಂದ ಇದರಲ್ಲಿ ಆಯ್ದ ಕೆಲವು ಲೇಖನ ಮತ್ತು ಕವನಗಳನ್ನು ಪ್ರಕಟಿಸಿದ್ದೇವೆ. ‘ಶಕ್ತಿ’ಗೆ ಸಲಾಂ ಹೇಳಿದ್ದೀರ.

ಓದುಗ ಅಭಿಮಾನಿಗಳೇ, ನಿಮಗಿದೋ ಪ್ರೀತಿಪೂರ್ವಕ ಸಲಾಂ.

?ಸಂ.ಆದಿಶಕ್ತಿ

ಅರವತ್ತಕ್ಕೆ ಅರಸಾಗಲಿ

ಹೊಸ-ಹೊಸ ಸುದ್ದಿಗಳು ತೊನೆದಾಡಲಿ

ಸತ್ಯ ಸಂದೇಶಗಳಿಗೆ ‘ಶಕ್ತಿ’ಯಾಗಲಿ

ನಿಂತ ನೀರಾಗದೆ ಅಡೆ-ತಡೆಯಿಲ್ಲದೆ ಭೋರ್ಗರೆವ ನದಿಯಾಗಲಿ

ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ ಎಲ್ಲವನು ಮೆಟ್ಟಿನಿಂತು ‘ಆದಿ’ ಶಕ್ತಿಯಾಗಲಿ&hellidiv;!

? ಶ್ರೀಮತಿ ಜಲಾಕಾಳಪ್ಪ, ಹಾನಗಲ್ಲು.