ಮಡಿಕೇರಿ, ಮಾ. 3: ಮೂಲತಃ ಕೊಡಗಿನವರಾದ, ಮೈಸೂರು ವಿಜಯನಗರದ ವೈದ್ಯ ಸಿ.ಎಂ. ವಿನೋದ್ ಎಂಬವರು ಕಾಣೆಯಾಗಿರುವ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾ. 2ರಂದು ಅಪರಾಹ್ನ ಮನೆಯಿಂದ ತೆರಳಿದ ವೈದ್ಯರು ವಾಪಾಸಾಗಿಲ್ಲ ವೆಂದು ದೂರಿನಲ್ಲಿ ತಿಳಿಸಲಾಗಿದೆ. ವೈದ್ಯರ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ಖಚಿತಪಡಿಸಿದ್ದಾರೆ.