ಕೊಡಗಿನವರೆಲ್ಲರ ಮನೆವiನಗಳ ಮಾತಾಗಿ ಹೊರಹೊಮ್ಮುತ್ತಿರುವ ನಮ್ಮೆಲ್ಲರ ಪೀತಿಯ ಶಕ್ತಿ ದಿನಪತ್ರಿಕೆ ಹೆಜ್ಜೆಯನ್ನಿಕ್ಕುತ 60 ಮೀರಿ 61ರ ಸಂವತ್ಸರಕ್ಕೆ ಕಾಲಿಡುತ್ತಿದೆ ನಮಗೆಲ್ಲರಿಗೂ ನಿತ್ಯವೂ ಸುದ್ದಿಯನ್ನು ಉಣ ಬಡಿಸುತ್ತಾ ವಜ್ರ ಮಹೋತ್ಸವದ ಸಂಭ್ರಮವನ್ನು ಆಚರಿಸಿಕೊಳ್ಳುತಿರುವ ‘‘ಶಕ್ತಿ’’ಗೆ ಶುಭವಾಗಲಿ ‘ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು, ಹೊಸಯುಕ್ತಿ ಹಳೆ ತತ್ವ ದೊಡಗೂಡಿ ಧರ್ಮ’ ಎಂಬಂತೆ ಕೊಡಗಿನ ಸುದ್ದಿಗಳನ್ನೆಲ್ಲ ಪತ್ರಿಕೆ ಎಂಬ ಬಿಳಿಹಾಳೆಗಳಲ್ಲಿ ಪುಟಪುಟಗಳಾಗಿ ಮುದ್ರಿಸಿ ಹಲವು ಕಷ್ಟಸುಖಗಳೊಂದಿಗೆ ಜನರ ಮನಗಳಿಗೆ ನಿತ್ಯವೂ ಸುದ್ದಿಗಳ ಸರಮಾಲೆಯ ಜೊತೆಗೆ ದೇಶವಿದೇಶಗಳ ಸುದ್ದಿಗಳು, ಲೇಖನಗಳು, ವೈಚಾರಿಕ ಬರಹಗಳು ಹತ್ತು ಹಲವು ಬರಹಗಳನ್ನು ನಿತ್ಯವೂ ಉಣಬಡಿಸುತ್ತಾ ಓದುಗನ ಜ್ಞಾನ ಹೆಚ್ಚಿಸುವುದರ ಜೊತೆಗೆ, ಹಲವು ಕಲ್ಲನ್ನು ಕೆತ್ತಿ ಅಂದದ ಶಿಲೆಯಾಗಿಸುವಂತೆ ಅದೆಷ್ಟೊ ಜನರನ್ನು ತಿದ್ದಿತೀಡಿ ಉತ್ತಮ ಬರಹಗಾರ, ಲೇಖಕರು ಹಾಗೂ ವರದಿಗಾರರನ್ನಾಗಿಸಿ ಬಹುಮುಖ ಪ್ರತಿಭೆಗೆ ಹಲವು ವೇದಿಕೆಯನ್ನು ಕಲ್ಪಿಸಿಕೊಡುತ್ತಿರುವ.

‘‘ಶಕ್ತಿ’’ ಮತ್ತಷ್ಟು ಉತ್ತುಂಗಕ್ಕೇರಲಿ

ಎಂಬುದು ನಮ್ಮೆಲ್ಲರ ಶುಭಹಾರೈಕೆ.

? ಕರುಣ್ ಕಾಳಯ್ಯ ಪುತ್ತರಿರ,

ನ್ಯೂಸ್ ಲಾಂಚರ್, ಚೆಟ್ಟಳ್ಳಿ