ಹೆಬ್ಬಾಲೆ, ಜು. 6: ಹೆಬ್ಬಾಲೆ ಗ್ರಾಮದ ವೀರ ಮಡಿವಾಳ ಸಂಘದ ವತಿಯಿಂದ ಲಕ್ಷ್ಮೀ ದೇವಿಯ 5ನೇ ವರ್ಷದ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. 2 ವರ್ಷಗಳಿಗೊಮ್ಮ ನಡೆಯುವ ಲಕ್ಷ್ಮೀ ದೇವಿಯ ಪೂಜೋತ್ಸವ ಶುಕ್ರವಾರ ಬೆಳಗ್ಗಿನಿಂದಲೇ ಅಭಿಷೇಕ, ಗಣಪತಿ ಹೋಮ, ಗೋವಿಂದ ಹೋಮ-ಹವನಗಳು ಪೂಜಾ ವಿಧಿ-ವಿಧಾನಗಳು ಪುರೋಹಿತರಾದ ಚಂದ್ರಪ್ಪ, ದೀಕ್ಷಿತ್ ಮನು ಅವರ ನೇತೃತ್ವದಲ್ಲಿ ನಡೆದವು. ಬೆಳಗಿನ ಜಾವ 5 ಗಂಟೆಗೆ ಕಾವೇರಿ ನದಿಯಿಂದ ಮಂಗಳವಾದ್ಯದೊಂದಿಗೆ ಕಲಶÀಗಳನ್ನು ತರಲಾಯಿತು. ಮಹಾ ಮಂಗಳಾರತಿಯ ನಂತರ ಅನ್ನ ಸಂತರ್ಪಣಾ ಕಾರ್ಯಕ್ರಮ ನೆರವೇರಿತು.

ದೇವಾಲಯ ಸಮಿತಿಯ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ವೀರಪ್ಪಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸಶೆಟ್ಟಿ, ನಿರ್ದೇಶಕರು ಹಾಗೂ ಗ್ರಾಮಸ್ಥರು ಪೂಜೋತ್ಸವದಲ್ಲಿ ಪಾಲ್ಗೊಂಡಿದ್ದರು.