ಸೋಮವಾರಪೇಟೆ, ಆ. 30: ಸಮೀಪದ ತೋಳೂರುಶೆಟ್ಟಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್.ಟಿ. ಸೋಮಯ್ಯ ಸೇರಿದಂತೆ ನಿರ್ದೇಶಕರಾಗಿ 10 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 11 ಸ್ಥಾನವಿರುವ ಸಹಕಾರ ಸಂಘಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇದ್ದುದರಿಂದ ಇವರುಗಳು ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ವರ್ಗದಲ್ಲಿ ಹೆಚ್.ಟಿ. ಸೋಮಯ್ಯ, ಡಿ.ಕೆ. ಅಶೋಕ್, ಬಿ.ಈ. ಸುರೇಶ್, ಎ.ಆರ್. ರಜಿತ್, ಡಿ.ಕೆ. ದಿನೇಶ್, ಕೆ.ಎಂ. ಚಂಗಪ್ಪ, ಡಿ.ಕೆ. ರವಿಕುಮಾರ್, ಐ.ಸಿ. ಅರುಣ್‍ಕುಮಾರ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಸವರಾಜು ಟಿ.ಎನ್., ಮಹಿಳಾ ಮೀಸಲು ಕ್ಷೇತ್ರದಿಂದ ಎಸ್.ಆರ್. ಸೀತಮ್ಮ, ಟಿ.ಯು. ವನಜಾಕ್ಷಿ ಅವರುಗಳು ಆಯ್ಕೆಯಾಗಿದ್ದಾರೆ.ನೂತನ ಅಧ್ಯಕ್ಷ ಸೋಮಯ್ಯ ಮಾತನಾಡಿ, ಈ ವ್ಯಾಪ್ತಿಯಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಹಕಾರ ಸಂಘ ಕಾರ್ಯನಿರ್ವಹಿಸಲಿದೆ. ರೈತಾಪಿ ವರ್ಗದ ಜೀವನಾಡಿಯಂತಿರುವ ಹೈನುಗಾರಿಕೆಗೆ ಸಂಪೂರ್ಣ ಸಹಕಾರ ನೀಡಲಾಗುವದು. ರೈತರ ಆರ್ಥಿಕ ಸಬಲತೆಗೂ ಪ್ರೋತ್ಸಾಹ ನೀಡಲಾಗುವದು ಎಂದರು.

ಚುನಾವಣಾಧಿಕಾರಿಯಾಗಿ ಜಿಲ್ಲಾ ನೋಂದಣಾಧಿಕಾರಿ ಕಚೇರಿಯ ಉಪ ನಿಬಂಧಕ ಮೋಹನ್ ಕಾರ್ಯನಿರ್ವಹಿಸಿದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಹಾಜರಿದ್ದರು.