ಕುಶಾಲನಗರ, ಜು. 8: ಇಲ್ಲಿಗೆ ಸಮೀಪದ ಗಂಧದ ಕೋಟಿಯಲ್ಲಿರುವ ಕೆ.ಎಂ.ಟಿ. ವಿದ್ಯಾಸಂಸ್ಥೆಯಲ್ಲಿ 2016-17 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗಾಗಿ ಮಂತ್ರಿಮಂಡಲವನ್ನು ರಚಿಸಲಾಯಿತು.

ರಾಜ್ಯದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯುವಂತೆ ಇಲ್ಲಿಯೂ ಚುನಾವಣೆಗೆ ಸಂಬಂಧಿಸಿದಂತೆ ಬ್ಯಾಲೆಟ್ ಪೇಪರ್, ಬ್ಯಾಲೆಟ್ ಬಾಕ್ಸ್ ಮತ್ತು ಸೀಲ್‍ಗಳನ್ನು ಬಳಸಿ ಚುನಾವಣೆ ನಡೆಸಿದ್ದು ವಿಶೇóಷವಾಗಿತ್ತು.

ಚುನಾವಣೆಯಲ್ಲಿ ಜಯಶೀಲರಾದ ವಿದ್ಯಾರ್ಥಿಗಳಿಗೆ ನಂಜರಾಯಪಟ್ಟಣ ಕ್ಲಸ್ಟರ್‍ನ ಸಿ.ಆರ್.ಪಿ. ಸತ್ಯನಾರಾಯಣ ಅವರು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ವೃಂದದವರು ಭಾಗವಹಿಸಿದ್ದರು.