ಶನಿವಾರಸಂತೆ, ಜೂ. 27: ಸಮೀಪದ ಕೊಡ್ಲಿಪೇಟೆಯ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ವಂಚಿತರಾದ ಅಸ್ಸಾಂ ಮೂಲದ ಐವರು ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಯಿತು.

ನಿವೃತ್ತ ಶಿಕ್ಷಕ ರೆಹಮಾನ್ ಸಹಕಾರದಿಂದ ಮಕ್ಕಳನ್ನು ಶಾಲೆಗೆ ಕರೆತಂದು ದಾಖಲಾತಿ ಮಾಡಿಕೊಳ್ಳಲು ಸಾಧ್ಯವಾಯಿತು ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎಂ. ಸುರೇಶ್ ಹೇಳಿದರು.

ಈ ಸಂದರ್ಭ ಮುಖ್ಯ ಶಿಕ್ಷಕ ಮುಜ್ಹಮಿಲ್ ಅಕ್ತರ್, ಶಿಕ್ಷಕ ಮಹಮ್ಮದ್ ಫಯಾಜ್, ಸಿಆರ್‍ಪಿ ಸುರೇಶ್ ಹಾಗೂ ಪೋಷಕರು ಹಾಜರಿದ್ದರು.