ಸೋಮವಾರಪೇಟೆ, ಮೇ 26: ವಾಸದ ಮನೆಯೊಳಗೆ ಸೇರಿಕೊಂಡು ಮನೆಮಂದಿಗೆ ಆತಂಕ ಮೂಡಿಸಿದ್ದ ನಾಗರ ಹಾವನ್ನು ಸ್ನೇಕ್ ಅನೂಷ್ ಹಿಡಿದು ಅರಣ್ಯಕ್ಕೆ ಬಿಟ್ಟರು.

ಸಮೀಪದ ಬೀಟಿಕಟ್ಟೆ ನಿವಾಸಿ ಎಚ್.ಆರ್. ಮುತ್ತಣ್ಣ ಅವರ ಮನೆಯೊಳಗೆ ಸೇರಿಕೊಂಡಿದ್ದ ನಾಗರಹಾವನ್ನು ಹಿಡಿದು ಯಡವನಾಡು ಅರಣ್ಯಕ್ಕೆ ಬಿಡಲಾಯಿತು. ವಾತಾವರಣ ಬಿಸಿಯಾಗಿರು ವದರಿಂದ ಹಾವುಗಳು ತಂಪಿರುವ ಜಾಗಕ್ಕೆ ತೆರಳುತ್ತವೆ. ಮನೆಯ ಸಮೀಪದಲ್ಲಿ ವಿಷದ ಹಾವುಗಳು ಕಂಡು ಬಂದರೆ ಅವುಗಳನ್ನು ಕೊಲ್ಲದೆ ತನಗೆ ಮಾಹಿತಿ ನೀಡಿದರೆ (ದೂ. ಸಂಖ್ಯೆ : 9844662240, 8971663454) ಹಾವುಗಳನ್ನು ಹಿಡಿದು ಕಾಡಿಗೆ ಬಿಡಲಾಗುವದು ಎಂದು ಅನೂಷ್ ಹೇಳಿದರು.