ಕುಶಾಲನಗರ, ಮೇ 25: ರಾಜ್ಯ ಬಿಜೆಪಿ ಘಟಕ ಹಾಲಿ ರಾಜ್ಯಸಭಾ ಸದಸ್ಯ ಎಂ. ವೆಂಕಯ್ಯನಾಯ್ಡು ಅವರನ್ನು ರಾಜ್ಯಸಭೆಗೆ ಮರು ಆಯ್ಕೆಗೊಳಿಸುವ ನಿರ್ಧಾರವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ವೇದಿಕೆಯ ಅಧ್ಯಕ್ಷ ವೆಂಕಟೇಶ್ ಪೂಜಾರಿ ಬಿ.ಎ.ನಾಗೇಗೌಡ, ಪ್ರಧಾನ ಕಾರ್ಯದರ್ಶಿ ಬಿ.ಎ.ದಿನೇಶ್, ಕಾರ್ಯದರ್ಶಿ ಸತೀಶ್, ಸಂಚಾಲಕ ಉದಯಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಸರಳಾ ರಾಮಣ್ಣ, ಪದಾಧಿಕಾರಿಗಳಾದ ಶೇಷಾದ್ರಿ, ವಿಜಯಕುಮಾರ್, ರಂಗಸ್ವಾಮಿ, ಕಮಲ, ಕಂದ, ಸರೋಜಮ್ಮ ಮೊದಲಾದವರು ಇದ್ದರು.