ಶನಿವಾರಸಂತೆ, ಜು. 14: ಶನಿವಾರಸಂತೆಯ ಪೊಲೀಸ್ ಠಾಣೆಯಲ್ಲಿ ದಲಿತ ಸಮುದಾಯದ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್ ವಹಿಸಿದ್ದರು. ದಲಿತ ಮುಖಂಡ ಕೂಡ್ಲೂರು ದೇವರಾಜ್ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಸಭೆಯಲ್ಲಿ ಎ.ಎಸ್.ಐ. ಬಿ.ಎಸ್. ಜನಾರ್ಧನ್, ಸಿಬ್ಬಂದಿಗಳಾದ ಶಿವಪ್ಪ, ಸಂತೋಷ್‍ಕುಮಾರ್, ಐ.ಜೆ. ಸುರೇಶ್, ಮಂಜು, ಸಫೀರ್, ಶಶಿ ಹಾಗೂ ದಲಿತ ಪ್ರಮುಖರಾದ ದೊಡ್ಡಳ್ಳಿ ಡಿ.ಜೆ. ಈರಪ್ಪ, ಕಚ್ಚೆಪುರ ರಾಜು, ಹರೀಶ್, ಮಹೇಶ್, ಹನುಮೇಗೌಡ ಮತ್ತಿತರರು ಹಾಜರಿದ್ದರು.