ಮಡಿಕೇರಿ, ಅ. 30: ಟಿಪ್ಪು ಜಯಂತಿಯನ್ನು ಈ ವರ್ಷವೂ ನ. 10 ರಂದು ಆಚರಿಸಲು ಹೊರಟಿರುವ ಸರಕಾರದ ಆದೇಶವನ್ನು ಕೊಡಗಿನ ಜಾತಿ, ಜನಾಂಗದವರು ವಿರೋಧಿಸಿಸು ತ್ತಿದ್ದರೂ ಸಿದ್ಧತೆಗೆ ಮುಂದಾಗಿದೆ. ಟಿಪ್ಪು ಜನಿಸಿದ್ದು ನವೆಂಬರ್ 10 ರಂದೋ ಅಥವಾ 20 ರಂದೋ? ಎಂದು ಮಕ್ಕಡ ಕೂಟ ಪ್ರಶ್ನಿಸಿದೆ.
ಸರಕಾರವೇ ಮುದ್ರಿಸಿ ಪ್ರಕಟಿಸಿದ ಪುಸ್ತಕ ದಾಖಲೆಗಳಲ್ಲೆಲ್ಲ ಹೈದರನ ಮಗನಾದ ಟಿಪ್ಪು 1753ರ ನವೆಂಬರ್ 20ರ ಶುಕ್ರವಾರದಂದು ಬೆಂಗಳೂರಿನ ದೇವನ ಹಳ್ಳಿಯಲ್ಲಿ ಜನ್ಮತಾಳಿದನೆಂದು ಇದೆ. 2011ರಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾದ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ಹಾಗೂ ಟಿಪ್ಪುವಿನ ಅಧ್ಯಯನ ವಿಷಯದಲ್ಲಿರುವ ಹಲವು ಪುಸ್ತಕಗಳಲೆಲ್ಲ ನವೆಂಬರ್20 ಎಂದೇ ಮುದ್ರಿಸಲಾಗಿದೆ.
ಆದರೆ ಟಿಪ್ಪುವಿನ ಜನನ ದಿನಕ್ಕಿಂತ ಮೊದಲೇ ಟಿಪ್ಪು ಜಯಂತಿಯನ್ನು ಆಚರಿಸುವ ಸರಕಾರಕ್ಕೆ ಭೇಷ್ ಅನ್ನಲೇ ಬೇಕು? ಮಕ್ಕಳಿಗೆ ಕಲಿಸುವದು ಟಿಪ್ಪು ಜಯಂತಿ ನ. 20 ಎಂದು. ಆದರೆ ಆಚರಿಸು ವದು ನ. 10 ರಂದು. ಶಾಂತಿ ಸಮೃದ್ಧಿಯಿಂದ ಕೂಡಿದಂತಹ ಕೊಡವ ನಾಡನ್ನು ಧ್ವಂಸ ಮಾಡಿದ ಟಿಪ್ಪುವಿನ ಜಯಂತಿಯ ಹಿಂದಿನ ಉದ್ದೇಶ ವಾದರೂ ಏನು? ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಗೂ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.