ಮಡಿಕೇರಿ, ಆ. 13: ಎಲ್ಲಿ ನೋಡಿದರೂ ವಾಹನಗಳು..., ಎತ್ತ ಕಣ್ಣಾಯಿಸಿದರೂ ಜನಸ್ತೋಮ..., ಮಡಿಕೇರಿ ನಗರದಲ್ಲಿಂದು ಕಂಡು ಬಂದ ವಾಹನಗಳು ಹಾಗೂ ಜನ ಸಂದಣಿಯನ್ನು ಕಂಡು ಬಹುಶಃ ನಿಟ್ಟುಸಿರು ಬಿಡದವರಿಲ್ಲ. ಸತತವಾಗಿ ಮೂರು ದಿನಗಳ ಕಾಲ ರಜೆ ಹಾಕಿ ಮಂಜಿನ ನಗರಿಗೆ ಬಂದ ಪ್ರವಾಸಿಗರ ದಂಡನ್ನು ಕಂಡು ಸ್ಥಳೀಯರೇ ದಂಗಾದರು ಎಂದರೆ ಅದು ಅತಿಶಯೋಕ್ತಿ ಅಲ್ಲ. ವಾಹನ ದಟ್ಟಣೆ ಹೇಗಿತ್ತೆಂದರೆ ಮುಂದಕ್ಕೂ ಚಲಿಸಲಾಗದೆ ಹಿಂದಕ್ಕೂ ಹೋಗಲಾಗದೆ ಅಡಕತ್ತರಿಯಲ್ಲಿ ಸಿಕ್ಕಂತಾಗಿತ್ತು ವಾಹನ ಸವಾರರ ಪರಿಸ್ಥಿತಿ! ಇನ್ನು ಪೊಲೀಸರ ಸಂಕಷ್ಟವಂತೂ ಹೇಳತೀರದು. ರಸ್ತೆಯನ್ನು ಬಿಟ್ಟು ಅತ್ತಿಂದಿತ್ತ ಕದಲುವದಕ್ಕೂ ಹೆಣಗಾಡಬೇಕಾದ ಸ್ಥಿತಿ. ಒಂದು ಕ್ಷಣ ಎಚ್ಚರ ತಪ್ಪಿದರೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ! ಸುರಿಯುವ ಮಳೆಯ ನಡುವೆಯು ಪೊಲೀಸ್ ಪೇದೆಗಳು ಕರ್ತವ್ಯ