ಸಿದ್ದಾಪುರ, ಮೇ 23: ಚೆÀನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಜೆ.ಕೆ ಅಪ್ಪಾಜಿ ಎಂಬವರ ಮೇಲೆ ದಿಡ್ಡಳ್ಳಿ ಹಾಡಿಯ ಕೆಲವರು ಜಾಗದ ವಿಚಾರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅಪ್ಪಾಜಿ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ

ದಿಡ್ಡಳ್ಳಿ ಹಾಡಿಯಲ್ಲಿ ರಸ್ತೆ ಅಭಿವೃದ್ಧಿಗೆ ಜಾಗ ಕೇಳಿದ ಕಾರಣಕ್ಕೆ ಹಾಡಿಯ ನಿವಾಸಿಗಳಾದ ಹರೀಶ್, ರಾಜಪ್ಪ, ರಘು, ಶಿವಣ್ಣ, ಸುಬ್ಬ, ಸುಶೀಲಾ, ಶಿವಮ್ಮ ಎಂಬವರು ಕೈ. ದೊಣ್ಣೆ, ಕತ್ತಿಯಿಂದ ಹಲ್ಲೆ ನಡೆಸಿದ್ದು, ಸ್ಥಳಿಯರು ಸಿದ್ದಾಪುರ ಅಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಿದ್ದಾರೆ. ಸಿದ್ದಾಪುರ ಠಾಣೆಯಲ್ಲಿ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಗ್ರಾಮಸ್ಥರ ಖಂಡನೆ

ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗಿರಿಜನ ಮುಖಂಡ ಜೆ.ಕೆ. ಅಪ್ಪಾಜಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಸಮಾಜ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಮೇಲೆ ಹಲ್ಲೆ ಮಾಡಿರುವದು ಖಂಡನೀಯ. ಕೂಡಲೇ ಹಲ್ಲೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಂಧಿಸಬೇಕೆಂದು ಗ್ರಾಮಸ್ಥರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭ ಚೆÀನ್ನಂಗಿ, ಮೂಡಬೈಲು ಗುಡ್ಲುರು, ಡಿಡ್ಡಳ್ಳಿ ಗ್ರಾಮದ ನಿವಾಸಿಗಳಾದ ಮುತ್ತಮ್ಮ, ಮಾದಪ್ಪ, ಪೂವಯ್ಯ, ವಸಂತ, ಉಮೇಶ್, ಅರುಣ್ ಕುಮಾರ್, ರಮೇಶ್, ರತನ್, ಅನೀಲ್, ಉತ್ತಯ್ಯ ಉಪಸ್ಥಿರಿದ್ದರು.