ಕುಶಾಲನಗರ, ಜೂ. 10: ಹೆಬ್ಬಾಲೆಯಲ್ಲಿ ಮನೆಯ ಬೀಗ ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದ ಬಾಲಕನೊಬ್ಬನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈತನೊಂದಿಗೆ ಕೈಜೋಡಿಸಿದ್ದ ನಾಲ್ವರು ಯುವಕರು ತಲೆಮರೆಸಿಕೊಂಡಿದ್ದಾರೆ.

ಹೆಬ್ಬಾಲೆ ಮಿಲ್ ಬಳಿಯ ತಬಲ ವಿಜಯಕುಮಾರ್ ಎಂಬವರ ಮನೆಗೆ ನುಗ್ಗಿ ಬುಧವಾರ ರಾತ್ರಿ ಚಿನ್ನಾಭರಣ, ಬೆಳ್ಳಿ ಸೇರಿದಂತೆ ನಗದು ಕಳ್ಳತನ ಮಾಡಿದ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಕ್ಷಣ ಕಾರ್ಯೋನ್ಮುಖ ರಾದ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಮಹೇಶ್ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ಯಲ್ಲಿ ಬಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಶ್ವಾನದಳ ಸಹಾಯ ದಿಂದ ಆರೋಪಿಗಳ ಪತ್ತೆಗೆ ಸಹಕಾರಿ ಯಾಗಿದೆ. ಇನ್ನುಳಿದಂತೆ ಕುಶಾಲನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.