ಮಡಿಕೇರಿ ಮೇ 25 : ಸಂಪಿಗೆ ಸೇರಿದಂತೆ ಇತರ ಕಾಡು ಜಾತಿ ಮರಗಳ 202 ನಾಟಾಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಮೈಸೂರಿಗೆ ಸಾಗುತ್ತಿದ್ದ ಲಾರಿಯನ್ನು (ಕೆಎ 20 ಎ 6516) ಚೆಂಬೆಬೆಳ್ಳೂರು ಬಳಿ ವಶಪಡಿಸಿಕೊಂಡಿದ್ದಾರೆ. ಅಂದಾಜು 3 ಲಕ್ಷದ ಮರ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ ಕುಂಜಿಲದ ನಾಸಿರ್ ಹಾಗೂ ಕಿಶನ್ ಎಂಬವರುಗಳನ್ನು ಬಂಧಿಸಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ಡಾ. ಶಂಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ವಲಯ ಅರಣ್ಯಾಧಿಕಾರಿ ಗೋಪಾಲ್ ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ಅರಣ್ಯ ರಕ್ಷಕ ಗಣೇಶ್, ಚೌಡಪ್ಪ ನಾಯಕ್, ಸಿಬ್ಬಂದಿಗಳಾದ ಹರೀಶ್, ಮೋಹನ್, ಶಶಿ, ಸಿದ್ದಾರ್ಥ ಪಾಲ್ಗೊಂಡಿದ್ದರು.