ಕುಶಾಲನಗರ/ನಾಪೆÇೀಕ್ಲು, ಡಿ. 14: ಮೈಸೂರು ರಸ್ತೆಯ ಬಿಳಿಕೆರೆಯಲ್ಲಿ ಸ್ವಿಫ್ಟ್ ಡಿಸೈಯರ್ ಮತ್ತು ಪಿಕ್‍ಅಪ್ ವಾಹನ ಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಕೊಡಗಿನ ಪಾಲೂರು ಗ್ರಾಮದ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಮಂಗಳವಾರ ಅಪರಾಹ್ನ 2.10ಕ್ಕೆ ನಡೆದಿದೆ.

ಪಾಲೂರು ಗ್ರಾಮದ ಮಂದನೆರವಂಡ ಡೈಸಿ ಕಾರ್ಯಪ್ಪ (45) ಮತ್ತು ಬೇಬಿ ತಿಮ್ಮಯ್ಯ (54) ಮೃತಪಟ್ಟ ದುರ್ದೈವಿಗಳು. ಇವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಅದೇ ಗ್ರಾಮದ ಪೆÇದುವಡ ಆಶ, ವೀಣಾ ಮತ್ತು ಸರಸ್ವತಿ ಅವರುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ: ಈ ಐವರು ಮಹಿಳೆಯರು ಡೈಸಿ ಕಾರ್ಯಪ್ಪ ಅವರ ಸ್ವಿಫ್ಟ್ ಡಿಸೈಯರ್ (ಕೆಎ 12- ಪಿ. 5751) ಕಾರಿನಲ್ಲಿ ಮೈಸೂರಿನಲ್ಲಿ ನಡೆದ ಮದುವೆ ಸಮಾರಂಭವೊಂದಕ್ಕೆ ಒಟ್ಟಿಗೆ ತೆರಳಿದ್ದರು. ಡೈಸಿ ಕಾರ್ಯಪ್ಪ ತನ್ನ ಕಾರನ್ನು ತಾವೇ ಚಾಲನೆ ಮಾಡುತ್ತಿದ್ದರು. ಸಮಾರಂಭ ಮುಗಿಸಿ ಹಿಂತಿರುಗುವ ವೇಳೆ ಅಪರಾಹ್ನ 2.10 ಗಂಟೆಗೆ ಎದುರಿನಿಂದ ಬರುತ್ತಿದ್ದ ಪಿಕ್‍ಅಪ್ ವಾಹನಕ್ಕೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಕಾರು ಚಾಲಿಸುತ್ತಿದ್ದ

(ಮೊದಲ ಪುಟದಿಂದ) ಡೈಸಿ ಕಾರ್ಯಪ್ಪ ಮತ್ತು ಅವರ ಹಿಂಬದಿ ಸೀಟಿನ ಬಾಗಿಲ ಬದಿಯಲ್ಲಿ ಕುಳಿತಿದ್ದ ಬೇಬಿ ತಿಮ್ಮಯ್ಯ ಇವರುಗಳು ಸ್ಥಳದಲ್ಲಿಯೇ ಮೃತಪಟ್ಟರೆ, ಸಣ್ಣ ಪುಟ್ಟ ಗಾಯಗಳಾಗಿದ್ದ ಇತರ ಮೂವರನ್ನು ಮೈಸೂರು ಆಸ್ಪತ್ರೆಗೆ ಸೇರಿಸಲಾಗಿದೆ. ಡೈಸಿ ಕಾರ್ಯಪ್ಪ ಅವರ ಪತಿ ಜಯ ಕಾರ್ಯಪ್ಪ ಈ ಹಿಂದೆಯೇ ನಿಧನರಾಗಿದ್ದು, ಇವರು ಪುತ್ರ ಪ್ರಗತ್ ಮತ್ತು ಪುತ್ರಿ ಪ್ರಣಿತಾ ಅವರನ್ನು ಅಗಲಿದ್ದಾರೆ. ಬೇಬಿ ತಿಮ್ಮಯ್ಯ ಅವರ ಪತಿ ದಿನೇಶ್ ತಿಮ್ಮಯ್ಯ ಅವರನ್ನು ಹಿಂದೆಯೇ ಅಗಲಿದ್ದು, ಪುತ್ರ ಬೋಪಣ್ಣ ಮತ್ತು ಪುತ್ರಿ ಡಿನ್ನಿಯನ್ನು ಅಗಲಿದ್ದಾರೆ.ಘಟನೆ ನಡೆದ ಸಂದರ್ಭ ಕುಶಾಲನಗರದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ದುಬಾರೆಯ ಉದ್ಯಮಿ ರತೀಶ್ ಅವರು ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ನಂತರ ತಮ್ಮ ಕಾರಿನಲ್ಲಿ ಮೈಸೂರಿಗೆ ಕೊಂಡೊಯ್ಯುವಲ್ಲಿ ಸಹಕರಿಸಿ ಮಾನವೀಯತೆ ಮೆರೆದರು. ಮೃತರ ಶವವನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಬಿಳಿಕೆರೆ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ನವೀನ್ ಗೌಡ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.