ಗೋಣಿಕೊಪ್ಪಲು, 13: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಬಿಟ್ಟಂಗಾಲ ವಲಯ, ಭದ್ರಕಾಳಿ ದೇವಾಲಯ ಸಮಿತಿ ಬಿಟ್ಟಂಗಾಲ, ಬಾಳುಗೋಡು ಇವರ ಸಂಯುಕ್ತ ಆಶ್ರಯದಲ್ಲಿ ಬಾಳುಗೋಡುವಿನ ಭದ್ರಕಾಳಿ ದೇವಾಲಯದ ಮುಂಭಾಗ ಸ್ವಚ್ಛತಾ ಕಾರ್ಯ ನಡೆಯಿತು.

ಬಿಟ್ಟಂಗಾಲ ಒಕ್ಕೂಟದ ಅಧ್ಯಕ್ಷೆ ರೇಖಾ ಗಣೇಶ್, ಭದ್ರಕಾಳಿ ದೇವಸ್ಥಾನದ ಅಧ್ಯಕ್ಷೆ ಚೇಂದಂಡ ಇಂದು ಭೀಮಯ್ಯ, ಮಹಿಳಾ ಸಮಾಜದ ಅಧ್ಯಕ್ಷೆ ಎಂ.ಕೆ. ಲತಾ, ವಲಯ ಮೇಲ್ವಿಚಾರಕ ರವೀಂದ್ರ, ಬಿಟ್ಟಂಗಾಲ ಗ್ರಾ.ಪಂ. ಸದಸ್ಯೆ ಕಮಲ, ಸೇವಾ ಪ್ರತಿನಿಧಿ ಸಿ.ಎಸ್. ಮೀನಾ, ಹಾಗೂ ಚೋಂದಮ್ಮ ಮತ್ತಿತರರು ಉಪಸ್ಥಿತರಿದ್ದರು.