ಸೋಮವಾರಪೇಟೆ, ಆ. 16: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಭಾರತೀಯ ಜನತಾ ಪಾರ್ಟಿಯಿಂದ ಜನಜಾಗೃತಿ ಮೂಡಿಸಲು ಆಯೋಜಿಸಿರುವ ತಿರಂಗಾ ಯಾತ್ರೆಗೆ ಸೋಮವಾರಪೇಟೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸ್ವಾಗತ ಕೋರಿದರು.

ಭಾರತಾಂಬೆಯ ಭಾವಚಿತ್ರವನ್ನು ಹೊತ್ತು ರಾಷ್ಟ್ರಧ್ವಜದೊಂದಿಗೆ ಶನಿವಾರಸಂತೆಯಿಂದ ಆಗಮಿಸಿದ ವಾಹನಗಳನ್ನು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಕಾರ್ಯಕರ್ತರು ಬರಮಾಡಿ ಕೊಂಡರು. ನಂತರ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಲಾಯಿತು.

ಈ ಸಂದರ್ಭ ಪಕ್ಷದ ಮಾಜೀ ಜಿಲ್ಲಾಧ್ಯಕ್ಷ ಬಿ.ಡಿ. ಮಂಜುನಾಥ್, ತಾಲೂಕು ಅಧ್ಯಕ್ಷ ಕೊಮಾರಪ್ಪ, ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ಉಪಾಧ್ಯಕ್ಷ ಶುಂಠಿ ಸುರೇಶ್, ನಗರ ಯುವಮೋರ್ಚಾ ಅಧ್ಯಕ್ಷ ಶರತ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಶ್ರೀಕಾಂತ್, ಪ್ರಮುಖರಾದ ಕಿಬ್ಬೆಟ್ಟ ಮಧು, ಅಶೋಕ್, ಮುರುಳಿ, ಪ್ರಮೋದ್, ಭುವನ್, ಪ್ರಜಾ ಪೂಣಚ್ಚ, ಪಿ. ಮಧು ಸೇರಿದಂತೆ ಇತರರು ಉಪಸ್ಥಿತರಿದ್ದರು.