ಚೆಯ್ಯಂಡಾಣೆ, ಡಿ. 2: ಕೊಡಗು ಜಿಲ್ಲಾ ನಿವೃತ್ತ ಉದ್ಯೋಗಸ್ಥರ ಸಂಘದ 49ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಿ.ಜಿ. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೆ.ಟಿ. ಕುಟ್ಟಮ್ಮ ಪ್ರಾರ್ಥಿಸಿದರು. ಸಿ.ಜಿ. ದೇವಯ್ಯ ಸ್ವಾಗತಿಸಿದರು. ಮೃತ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಸಿ.ಸಿ. ಕಾವೇರಿಯಮ್ಮ ಮಹಾಸಭೆಯ ವರದಿ ಮಂಡಿಸಿದರು. ಲೆಕ್ಕ ಪರಿಶೋಧನಾ ವರದಿಯನ್ನು ಅಧ್ಯಕ್ಷರು ಮಂಡಿಸಿದರು. ಆಡಳಿತ ಮಂಡಳಿ ವರದಿಯನ್ನು ಬಿ.ಜಿ. ಚಂಗುವಮ್ಮಯ್ಯ ಓದಿದರು.

ಕುಕ್ಕೆರ ಎ. ಚಂಗಪ್ಪ, ಮೂಡೇರ ಬಿ. ಅಮ್ಮಕ್ಕಿ, ಕಾಟಿಮಾಡ ಕೆ. ಡಿಕ್ಕಿ ಅಣ್ಣಯ್ಯ, ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಟಿಮಾಡ ಎ. ಜಿಮ್ಮಿ ಅಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು. ಲೂಯಿಸ್ ಖ್ರಗಾಂಝ ವಂದಿಸಿದರು.