ನಾಪೆÇೀಕ್ಲು, ಜು. 15: ಡಿವೈಎಸ್ಪಿ ಮಾದಪಂಡ ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಹಾಗೂ ಇದಕ್ಕೆ ಕಾರಣರಾದ ಕೆ.ಜೆ.ಜಾರ್ಜ್ ಮತ್ತು ಉನ್ನತ ಪೆÇಲೀಸ್ ಅಧಿಕಾರಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಪೆÇನ್ನಂಪೇಟೆ ಕೊಡವ ಸಮಾಜ ಕರೆ ನೀಡಿದ ವಾಹನ ಜಾಥಾಕ್ಕೆ ನಾಪೆÇೀಕ್ಲುವಿನಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.

ನಾಪೆÇೀಕ್ಲು ಕೊಡವ ಸಮಾಜ, ನಾಲ್ಕುನಾಡು ಫಾರ್ಮರ್ಸ್ ಕ್ಲಬ್, ಬಿಜೆಪಿ ಸ್ಥಾನೀಯ ಸಮಿತಿ, ಭಜರಂಗದಳ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ನಾಪೆÇೀಕ್ಲು ಮಾರುಕಟ್ಟೆ ಆವರಣದಿಂದ ಬೃಹತ್ ವಾಹನ ಜಾಥಾ ಆರಂಭಿಸುವದರ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಜಾಥಾದಲ್ಲಿ ಕೊಡವ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಜಿಜೆಪಿ ಮುಖಂಡರು, ಜಿಲ್ಲಾ ಪಂಚಾಯಿತಿ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು.