*ಗೋಣಿಕೊಪ್ಪ, ಅ. 8: 6ನೇ ದಿನದ ಗೋಣಿಕೊಪ್ಪ ಜನೋತ್ಸವದ ಸಾಂಸ್ಕøತಿಕ ಸಂಜೆ ಯುವ ಪ್ರತಿಭೆಗಳ ವೇದಿಕೆಯಾಗಿತ್ತು.
38ನೇ ದಸರಾ ಜನೋತ್ಸವದ ಅಂಗವಾಗಿ ಕಾವೇರಿ ಕಲಾ ವೇದಿಕೆಯಲ್ಲಿ ನಡೆದ ಸಾಂಸ್ಕøತಿಕ ಸಂಜೆ ಸ್ಥಳೀಯ ರಿಫ್ಲೆಕ್ಷನ್ ಡ್ಯಾನ್ಸ್ ತಂಡ ತಮ್ಮ ಪ್ರತಿಭೆಗಳನ್ನು ಹೊರಹಾಕಿ ಉತ್ತಮ ನೃತ್ಯ ಪ್ರದರ್ಶನ ನೀಡಿ ಜನರನ್ನು ಆಕರ್ಷಿಸಿದರು. 3 ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಯುವ ಸಮುದಾಯವೇ ವೇದಿಕೆಯಲ್ಲಿ ನೆರೆದು ಅಮೋಘ ಪ್ರದರ್ಶನ ನೀಡಿದರು. ಚಲನಚಿತ್ರ ಗೀತೆ, ಭಕ್ತಿ ಗೀತೆ, ಭಾವಗೀತೆ, ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ಜನರನ್ನು ರಂಜಿಸಿದರು.
ಕಾರ್ಯಕ್ರಮ ವೀಕ್ಷಿಸಲು ಜನ ಸಮೂಹವೇ ಸಭಾಂಗಣದಲ್ಲಿ ನೆರೆದಿತ್ತು. ಗಂಟೆಗಳ ಕಾಲ ರಿಫ್ಲೆಕ್ಷನ್ ಡ್ಯಾನ್ಸ್ ತಂಡ ನಡೆಸಿಕೊಟ್ಟ ನೃತ್ಯ ಜನರ ಮನಸ್ಸನ್ನು ಹಿಡಿದಿಟ್ಟಿತು. ರಕ್ತ ಕಾಟೀರಿ ಎಂಬ ಹಾಡಿಗೆ ನೃತ್ಯ ಮಾಡುವ ಮೂಲಕ ಸಾಂಸ್ಕøತಿಕ ಸಂಜೆಗೆ ಮುನ್ನುಡಿ ಹಾಡಿದ ತಂಡ ಕೊನೆಯ ವರೆಗೂ ತನ್ನ ಪ್ರದರ್ಶನದಿಂದ ವೇದಿಕೆಯನ್ನು ಹಿಡಿದಿಟ್ಟುಕೊಂಡಿತು.
ಪುಟಾಣಿ ಪ್ರತಿಭೆಗಳು ತಮ್ಮದೆ ಶೈಲಿಯಲ್ಲಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು, ಪುಟಾಣಿ ಕುಲ್ಲಚಂಡ ಹರ್ಷಿಲ್ ಅಯ್ಯಪ್ಪ ಕೊಡವ ಸಾಂಪ್ರದಾಯಿಕ ಉಡುಪು ಧರಿಸಿ ನೃತ್ಯ ಮಾಡಿದ್ದು ಆಕರ್ಷಕವಾಗಿತ್ತು.
ಯುವ ಪ್ರತಿಭೆಗಳ ನೃತ್ಯ ಪ್ರದರ್ಶನ ಜನರನ್ನು ರಂಜಿಸಿದರೆ ಇತ್ತ ನಿರೂಪಕನ ವಾಚಾಳಿತನ ಜನರಿಗೆ ಕಿರಿಕಿರಿ ತರಿಸುತ್ತಿತ್ತು. ನಿರೂಪಕನ ಮಾತಿನಿಂದ ಹೆಚ್ಚು ಸಮಯ ವ್ಯರ್ಥವಾಯಿತು.
ಈ ಸಮಯದಲ್ಲಿ ಮತ್ತಷ್ಟು ನೃತ್ಯಗಳನ್ನು ಮಾಡುವ ಮೂಲಕ ಮತ್ತಷ್ಟು ರಂಜಿಸಲು ಕಾರಣವಾಗ ಬಹುದಿತ್ತು ಎಂದು ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದರು.
ಸಂಜೆ 6 ಗಂಟೆಗೆ ಕೇರಳದ ಪ್ರತಿಭೆಗಳಿಂದ ಕಥಕಳಿ ಹಾಗೂ ಕೇರಳದ ಮಲೆಯಾಳಿ ಸಂಸ್ಕøತಿಯನ್ನು ಬಿಂಬಿಸುವ ನೃತ್ಯಗಳನ್ನು ಪ್ರದರ್ಶಿಸಿ ದರು. ಹರ್ಷಿತಾ ಮತ್ತು ಮುತ್ತಪ್ಪ ನಡೆಸಿಕೊಟ್ಟ ನೃತ್ಯ ಆಕರ್ಷಕವಾಗಿತ್ತು.
ಸೆಲ್ವಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷೆ ರಾಣಿ ನಾರಾಯಣ, ಗೋಣಿಕೊಪ್ಪ ಗ್ರಾ.ಪಂ. ಮಾಜಿ ಸದಸ್ಯೆ ರೀನಾ ರಾಜೀವ್, ಸುಮಿತ್ರಾ, ಕಾವೇರಿ ದಸರಾ ಸಮಿತಿ ಸದಸ್ಯರುಗಳಾದ ಕಿರುಗೂರು ನವೀನ್ ಧನಲಕ್ಷ್ಮಿ, ನವೀನ್, ಕುಪ್ಪಂಡ ಗಣೇಶ್ ತಿಮ್ಮಯ್ಯ ಉಪಸ್ಥಿತರಿದ್ದರು.