ಹೆಬ್ಬಾಲೆ, ಜೂ. 8: ಗಾಂಜಾ ವ್ಯಾಪಾರಿಯೋರ್ವನನ್ನು ಕುಶಾಲನಗರ ಪೊಲೀಸರು ಧಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಸಮೀಪದ ತೊರೆನೂರು ಗ್ರಾಮದ ನಿವಾಸಿ ಲಕ್ಷ್ಮಪ್ಪ (68) ತನ್ನ ಮನೆಯಲ್ಲೇ ಗಾಂಜಾ ವ್ಯಾಪಾರ ನಡೆಸುತ್ತಿದ್ದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕುಶಾಲನಗರದ ಡಿ.ವೈ.ಎಸ್.ಪಿ. ಕುಮಾರ್ ಮಾರ್ಗದರ್ಶನದಲ್ಲಿ ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣಾಧಿಕಾರಿ ಜಿ.ಇ. ಮಹೇಶ್ ಅವರ ನೇತೃತ್ವದಲ್ಲಿ ಆರೋಪಿ ಮನೆಗೆ ಧಾಳಿ ನಡೆಸಿದಾಗ ಸುಮಾರು 10 ಪ್ಯಾಕ್ ಗಾಂಜಾ ದೊರೆತಿದ್ದು, ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಪೆÇೀಲೀಸ್ ಪೇದೆಗಳಾದ ಪೆÇನ್ನಪ್ಪ, ಲೋಕೇಶ್, ಸಮಂತ್ ಹಾಗೂ ಚಾಲಕ ರಾಜು ಪಾಲ್ಗೊಂಡಿದ್ದರು.