ವೀರಾಜಪೇಟೆ, ಆ. 27: ಅಂದವಾದ ಹಾಗೂ ಆರೋಗ್ಯವಂತ ಹಲ್ಲುಗಳು ಮುಖದ ಶೋಭೆಯನ್ನು ಹೆಚ್ಚಿಸುತ್ತದೆ ಎಂದು ಕೊಡಗು ದಂತ ಮಹಾವಿದ್ಯಾಲಯದ ವೈದ್ಯ ಡಾ. ವಿದ್ಯಾಧರ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿನ ಎನ್‍ಎಸ್‍ಎಸ್ ಘಟಕ ಹಾಗೂ ಕೊಡಗು ದಂತ ಮಹಾ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ದಂತ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.

ಯುವ ಜನಾಂಗ ಸುಂದರ ದಂತ ಪಂಕ್ತಿಯಿಂದ ಆರೋಗ್ಯವಂತರಾಗಿ ಸಂತೋಷದ ಜೀವನ ನಡೆಸಲಿ ಎಂದು ಹಾರೈಸಿದರು. ಕೊಡಗು ದಂತ ಮಹಾವಿದ್ಯಾಲಯದ ಡಾ. ಜಾನ್ ಹಲ್ಲಿನ ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆ ನೀಡಿದರು. ಕಾಲೇಜಿನ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಆರ್. ಮೋಹನ್, ಎನ್‍ಎಸ್‍ಎಸ್‍ನ ಕಾರ್ಯಕ್ರಮಾಧಿಕಾರಿ ಎಂ. ದಿನೇಶ್, ಹಿರಿಯ ಉಪನ್ಯಾಸಕಿ ಎಸ್.ಕೆ. ಜ್ಯೋತಿ ಹಾಗೂ ಬೀನ ಉಪಸ್ಥಿತ ರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ, ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.