ಮಡಿಕೇರಿ, ಸೆ. 15: ಎಸ್‍ಎನ್‍ಡಿಪಿ ಕೊಡಗು ಯೂನಿಯನ್ ವತಿಯಿಂದ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ 162ನೇ ಜನ್ಮ ದಿನಾಚರಣೆ ತಾ. 16 ರಂದು (ಇಂದು) ನಡೆಯಲಿದೆ.

ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ (ಎಸ್‍ಎನ್‍ಡಿಪಿ)ನ ಕೊಡಗು ಯೂನಿಯನ್ ಕಾರ್ಯದರ್ಶಿ ಎಂ.ವಿ. ಸಜೀವ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಸಿದ್ದಾಪುರದ ಸ್ವರ್ಣಮಾಲ ಸಭಾಂಗಣ ‘ಶ್ರೀ ನಾರಾಯಣ ನಗರ’ದಲ್ಲಿ ಬೆಳಿಗ್ಗೆ 9 ಗಂಟೆಗೆ ಗುರುಪೂಜೆ, 9.30 ಗಂಟೆಗೆ ಎಸ್‍ಎನ್‍ಡಿಪಿ ಯೋಗಂ ಕೊಡಗು ಯೂನಿಯನ್ ಉಪಾಧ್ಯಕ್ಷ ಎನ್.ಕೆ. ರಾಜೇಂದ್ರ ಬಾಬು ಅವರಿಂದ ಧ್ವಜಾರೋಹಣ ನೆರವೇರಲಿದೆ. 10.30 ಕ್ಕೆ ಸಿದ್ದಾಪುರದ ಶ್ರೀ ಅಯ್ಯಪ್ಪ ಸ್ವಾಮಿ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಎಸ್‍ಎನ್‍ಡಿಪಿ ಸದಸ್ಯರ ಮಕ್ಕಳಿಗೆ ಬಹುಮಾನ ಮತ್ತು ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ಧನವನ್ನು ವಿತರಿಸಲಾಗುವದೆಂದು ಎಂ.ವಿ. ಸಜೀವ ತಿಳಿಸಿದರು.

ಗೋಷ್ಠಿಯಲ್ಲಿ ಎಸ್‍ಎನ್‍ಡಿಪಿ ಯೂನಿಯನ್ ಕೌನ್ಸಿಲರ್‍ಗಳಾದ ಕೆ.ಎಂ. ಶಶಿಧರ್, ಪಿ.ಕೆ. ಚಂದ್ರನ್, ಆಚರಣಾ ಸಮಿತಿ ಕಾರ್ಯದರ್ಶಿ ವಿ.ಕೆ. ಗಿರೀಶ್ ಉಪಸ್ಥಿತರಿದ್ದರು.