*ಗೋಣಿಕೊಪ್ಪಲು, ಆ. 15: ಇತಿಹಾಸ ಪುಟಗಳನ್ನು ತಿರುವಿದಾಗ ಆತ್ಮವಿಶ್ವಾಸ ಮತ್ತು ದೃಢವಾದ ನಂಬಿಕೆಯಿಂದ ಗುರಿ ಸಾಧಿಸಿದ ವ್ಯಕ್ತಿಗಳನ್ನು ಮಾತ್ರ ಕಾಣÀಲು ಸಾಧ್ಯವಿದೆ ಎಂದು ಪೊನ್ನಂಪೇಟೆ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಡಾ. ಚಂದ್ರಶೇಖರ್ ಮಾಹಿತಿ ನೀಡಿದರು.

ಪೊನ್ನಂಪೇಟೆಯ ಅಪ್ಪಚ್ಚ ಕವಿ ವಿದ್ಯಾಲಯದಲ್ಲಿ ನಡೆದ ತಾಲೂಕು ಮಟ್ಟದ ಕಾಕಮಾಡ ನಾಣಯ್ಯ ದತ್ತಿನಿಧಿ ಭಾಷಣ ಸ್ಪರ್ಧೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ ದರು. ಮಕ್ಕಳಿಗೆ ಪ್ರಸ್ತುತ ಸಮಾಜದ ಪೂರ್ಣ ಮಾಹಿತಿಯನ್ನು ನೀಡಬೇಕಾಗಿದ್ದು, ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಯ ಮೇಲಿದೆ ಎಂದರು.

ಮತ್ತೂಬ್ಬ ಮುಖ್ಯ ಅತಿಥಿ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ, ಸಂಸ್ಥೆಯ ಅಧ್ಯಕ್ಷ ಪೊನ್ನಿಮಾಡ ಸುರೇಶ್ ಮಾತನಾಡಿದರು.

ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತೀರ್ಪು ಗಾರರಾದ ಕಿರಿಯಮಾಡ ಗಣೇಶ್, ಭಾಗ್ಯ ಬಿ.ಎನ್, ಬೀನಾ ರೋಜಿ, ಡಾ. ಸೋಮಣ್ಣ, ಮಹಮದ್ ಅಕ್ರಂ, ಅರ್ಜುನ್, ಶಾಲಾ ಮುಖ್ಯ ಶಿಕ್ಷಕಿ ತನುಜ, ಶಾಲಾ ಆಡಳಿತ ಮಂಡಳಿಯ ಆಡಳಿತಧಿಕಾರಿ ಕಾಳಿಮಾಡ ಮೋಟಯ್ಯ, ಕಾರ್ಯದರ್ಶಿ ಕಾಮುಣಿ ಪೂಣಚ್ಚ,ಖಜಾಜಿ ಮೂಕಳೇರ ಮಧು ಕುಮಾರ, ಮಾಜಿ ಅಧ್ಯಕ್ಷರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಹಾಜರಿದ್ದರು.