ಶ್ರೀಮಂಗ, ಸೆ. ೧೬ : ಪೊನ್ನಂಪೇಟೆಯಲ್ಲಿ ಜಬ್ಭೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎರಡನೇ ಕೊಡವ ಯುವಮೇಳವನ್ನು ೨೦೨೬ ಏಪ್ರಿಲ್ ೧೨ಕ್ಕೆ ಪೊನ್ನಂಪೇಟೆಯಲ್ಲಿ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಜಬ್ಭೂಮಿ ಸಂಘಟನೆಯ ಸಂಚಾಲಕ ಚೊಟ್ಟೆಕ್’ಮಾಡ ರಾಜೀವ್ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಹೊದ್ದೂರಿನಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು.

೨೦೨೩ರಲ್ಲಿ ಮಡಿಕೇರಿಯಲ್ಲಿ ಪ್ರಥಮ ಕೊಡವ ಯುವಮೇಳವನ್ನು ಜಬ್ಭೂಮಿ ಸಂಘಟನೆ ಯಶಸ್ವಿಯಾಗಿ ನಡೆಸಿತ್ತು. ಇದೀಗ ಎರಡನೇ ಕೊಡವ ಯುವಮೇಳವನ್ನು ಪೊನ್ನಂಪೇಟೆಯಲ್ಲಿ ನಡೆಸಿ ಜನಾಂಗದ ಸುಮಾರು ೧೦ ಸಾವಿರ ಯುವ ಪೀಳಿಗೆಯನ್ನು ಸೇರಿಸಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಮಾವೇಶಕ್ಕೂ ಮೊದಲು ಗೋಣಿಕೊಪ್ಪದಿಂದ ಪೊನ್ನಂಪೇಟೆವರೆಗೆ ಸುಮಾರು ೫ ಕಿ.ಮೀ ಮೆರವಣಿಗೆ ನಡೆಸಲಾಗುವುದು ಎಂದರು.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಯುವಮೇಳದ ಸಮಾವೇಶ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯವಾಗಿ ಯುವ ಪೀಳಿಗೆಯನ್ನು ಒಟ್ಟುಗೂಡಿಸುವ, ಕೊಡವ ಜನಾಂಗದ ಆಚಾರ ವಿಚಾರ ಸಂಸ್ಕೃತಿ, ನೆಲದ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ, ಇದರೊಂದಿಗೆ ಯುವ ಪೀಳಿಗೆಯಲ್ಲಿ ಸಂಪರ್ಕ ಬೆಸೆಯುವ ನಿಟ್ಟಿನಲ್ಲಿ ಈ ಯೋಜನೆಯನ್ನು ತರಲಾಗಿದ್ದು, ಕೊಡಗಿನ ನೆಲದೊಂದಿಗೆ ಕೊಡವರಿಗೆ ಇರುವ ಅವಿನಾಭಾವ ಸಂಬAಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಯುವಮೇಳ ಆಯೋಜಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ತಿಳುವಳಿಕೆ, ಮಕ್ಕಳಲ್ಲಿ ತಂದೆ ತಾಯಿ ಕುಟುಂಬದ ಪ್ರಯೋಜನದ ಬಗ್ಗೆ ಅರಿವು, ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಸಮಾವೇಶದಲ್ಲಿ ಕೈಗೊಳ್ಳಲು ನಿರ್ಧರಿಸಲಾಯಿತು.

ಸಭೆಯಲ್ಲಿ ಜಬ್ಭೂಮಿ ಸಂಘಟನೆಯ ಕಾರ್ಯ ಚಟುವಟಿಕೆ, ಮುಂದಿನ ಕಾರ್ಯಯೋಜನೆ ಬಗ್ಗೆ ಚರ್ಚಿಸಲಾಯಿತು. ಲೆಕ್ಕ ಪತ್ರ ಮಂಡಿಸಲಾಯಿತು. ಉಳುವಂಗಡ ಲೋಹಿತ್ ಭೀಮಯ್ಯ ಜಬ್ಭೂಮಿ ಗೀತೆ ಹಾಡಿದರು.

ಸಭೆಯಲ್ಲಿ ಜಬ್ಭೂಮಿ ಸಹ ಸಂಚಾಲಕರಾದ ಅಚ್ಚಾಂಡಿರ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಜಮ್ಮಡ ಗಣೇಶ್ ಅಯ್ಯಣ್ಣ, ಮಲ್ಲಮಾಡ ಪ್ರಭು ಪೂಣಚ್ಚ, ಮಚ್ಚಾಮಾಡ ಅನೀಶ್ ಮಾದಪ್ಪ, ಮಾಳೇಟಿರ ಶ್ರೀನಿವಾಸ್, ಚೈಯ್ಯಂಡ ಸತ್ಯ, ಎಂ. ಕುಟ್ಟಪ್ಪ, ಬಲ್ಲಿಮಾಡ ಸಂಪತ್, ಕೋಟೆರ ಕಿಶನ್ ಉತ್ತಪ್ಪ, ಕಿಮ್ಮುಡೀರ ರವಿ ಚಂಗಪ್ಪ, ಚೆಕ್ಕೆರ ಸಚಿನ್ ಸೋಮಯ್ಯ, ಚೆನ್ನಪ್ಪಂಡ ದರ್ಶನ್ ಪೊನ್ನಪ್ಪ, ಶಾಂತೇಯAಡ ನಿರನ್ ನಾಚಪ್ಪ, ಚೆಟ್ಟಂಗಡ ಕಂಬ ಕಾರ್ಯಪ್ಪ, ಚೆಟ್ಟಂಗಡ ರವಿ ಸುಬ್ಬಯ್ಯ, ಅಚ್ಚಪಂಡ ಮಹೇಶ್ ಮಾಚಯ್ಯ, ಸೋಮಣ್ಣ, ಪುಚ್ಚಿಮಂಡ ಅಪ್ಪಯ್ಯ, ಮೂಡೆರ ರಾಯ್, ಮಂಡೆಪAಡ ಕುಟ್ಟಯ್ಯ, ಅಮ್ಮಟಂಡ ಎಂ ದೇವಯ್ಯ, ಚಂಗAಡ ಸೂರಜ್ ತಮ್ಮಯ್ಯ, ಅವರೆಮಾದಂಡ ಅನಿಲ್, ಚೌರಿರ ಮಂದಣ್ಣ, ತೇಲಪಂಡ ಸುಬ್ಬಯ್ಯ, ಬಲ್ಯಾಟಂಡ ಕೌಶಿಕ್ ಕುಟ್ಟಯ್ಯ, ಬೊಳ್ಳಚೆಟ್ಟಿರ ಮೈನ ಕಾಳಪ್ಪ, ಪಳಗಂಡ ರೇಖಾ ತಮ್ಮಯ್ಯ, ಕುಂಜಿಲAಡ ಗ್ರೇಸಿ ಪೂಣಚ್ಚ, ಕಳ್ಳಿಚಂಡ ದೀನಾ ಅಣ್ಣಯ್ಯ, ಮೂಕಳೆರ ಕಾವ್ಯ ಮಧು, ಚೊಟ್ಟೆಕ್‌ಮಾಡ ನಾಚಪ್ಪ, ಬಡುವಂಡ ಎಂ. ಹರೀಶ್, ಚೇದಂಡ ಶಮ್ಮಿ ಮಾದಯ್ಯ, ಹಂಚಿಟ್ಟಿರ ಮನು ಮುದ್ದಪ್ಪ, ಚೆನ್ನಪ್ಪಂಡ ಮನು ಉತ್ತಪ್ಪ, ಕುಂಡಿಯೋಳAಡ ದಿನೇಶ್ ಕಾರ್ಯಪ್ಪ, ಚೇಂದAಡ ನವೀನ್, ಉಳುವಂಗಡ ಲೋಹಿತ್ ಭೀಮಯ್ಯ, ನೆರವಂಡ ಅನೂಪ್ ಉತ್ತಯ್ಯ ಮತ್ತಿತರರು ಹಾಜರಿದ್ದರು.