(1).jpg)
ಕೋವರ್ ಕೊಲ್ಲಿ ಇಂದ್ರೇಶ್
ಮೈಸೂರು, ಜ. ೨೯ : ನೂತನ ಮೈಸೂರು-ಕುಶಾಲನಗರ ಹೆದ್ದಾರಿ ವಿಭಾಗದ (ಓಊ-೨೭೫) ಯೋಜನೆ ಅನುಷ್ಠಾನಗೊಳಿಸುವ ಸಂಬAಧ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ನಡೆಯಿತು.
೩೩೦೦.೪೫ ಕೋಟಿ ರೂಪಾಯಿ ಗಳ ವೆಚ್ಚದ ಈ ಯೋಜನೆಗಾಗಿ ಅರಣ್ಯ ಇಲಾಖೆ, ಲೋಕೋಪ ಯೋಗಿ ಇಲಾಖೆ, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ , ಸೆಸ್ಕ್ , ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಿ ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು. ಈ ಉದ್ದೇಶಿತ ಯೋಜನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸ ಲಾಗಿದ್ದು ಕಾಮಗಾರಿಯು ಒಟ್ಟು ೩೦ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ.
ಈ ನೂತನ ಹೆದ್ದಾರಿಯು ಶ್ರೀರಂಗಪಟ್ಟಣದ ಅಗ್ರಹಾರ ಗ್ರಾಮದಿಂದ ಪ್ರಾರಂಭಗೊAಡು ಕುಶಾಲನಗರ ಹೊರವಲಯದ ಬಸವನಹಳ್ಳಿ ಗ್ರಾಮದವರೆಗೆ ಬರಲಿದ್ದು ಈ ಯೋಜನೆಯ ಒಟ್ಟು ಉದ್ದ ೯೨ ಕಿಲೋಮೀಟರ್ಗಳಾಗಿವೆ. ಈ ಹೆದ್ದಾರಿಯಲ್ಲಿ ೪೫ ಮೀಟರ್ಗಳಷ್ಟು ಅಗಲದ ೪ ಪಥಗಳ ರಸ್ತೆ ನಿರ್ಮಾಣ ಗೊಳ್ಳಲಿದೆ. ಈ ನೂತನ ಹೆದ್ದಾರಿಗೆ ಭೂಸ್ವಾಧೀನಕ್ಕಾಗಿ ಈಗಾಗಲೇ ಸರ್ವೆ ಕಾರ್ಯ ಪೂರ್ಣಗೊಂಡಿದ್ದು ಇದರಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ವಿತರಣೆ ಮಾತ್ರ ಬಾಕಿ ಇದೆ.
ಈ ಯೋಜನೆಯ ಸಿವಿಲ್ ಕಾಮಗಾರಿ ವೆಚ್ಚ ಸುಮಾರು ೨೩೦೦.೪೫ ಕೋಟಿ ರೂಪಾಯಿಗಳಾಗಿದ್ದು ಭೂಸ್ವಾದೀನಕ್ಕೆ ೧೦೦೦ ಕೋಟಿ ರೂಪಾಯಿ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಈ ಹೆದ್ದಾರಿಯಲ್ಲಿ ಕುಶಾಲನಗರ , ಪಿರಿಯಾಪಟ್ಟಣ, ಹುಣಸೂರು ಮತ್ತು ಶ್ರೀರಂಗಪಟ್ಟಣ ದಲ್ಲಿ ಟೋಲ್ ಬರಲಿದೆ. ಈ ಹೆದ್ದಾರಿ ಮೈಸೂರಿಗೆ ಸಂಪರ್ಕ ಹೊಂದುವುದಿಲ್ಲ. ಇದು ಬಸವನಹಳ್ಳಿ ಯಿಂದ ನೇರವಾಗಿ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಗೆ ಸಂಪರ್ಕ ಕಲ್ಪಿಸಲಿದೆ.
(ಮೊದಲ ಪುಟದಿಂದ) ಒಟ್ಟು ಮೂರು ಪ್ಯಾಕೇಜ್ಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು ಒಟ್ಟು ನಾಲ್ಕು ದೊಡ್ಡ ಸೇತುವೆಗಳು ಒಂದು ಚಿಕ್ಕ ಸೇತುವೆ ನಿರ್ಮಾಣಗೊಳ್ಳಲಿದೆ. ಈ ಹೆದ್ದಾರಿಯಲ್ಲಿ ಕೊಪ್ಪ ಬಳಿ ರೆಸ್ಟ್ ಏರಿಯಾ ಕೂಡ ನಿರ್ಮಾಣ ವಾಗಲಿದ್ದು ಒಟ್ಟು ೧೩.೧೬ ಕಿಲೋ ಮೀಟರ್ ಉದ್ದದ ಸರ್ವೀಸ್ ರಸ್ತೆ ಮತ್ತು ೨೧.೬೫ ಕಿಲೋಮೀಟರ್ ಉದ್ದದ ಸ್ಲಿಪ್ ರಸ್ತೆ ನಿರ್ಮಾಣಗೊಳ್ಳಲಿದೆ.
ಈ ಹೆದ್ದಾರಿಗೆ ಕುಶಾಲನಗರದಲ್ಲಿ ೧೨.೩೨ ಕಿಲೋಮೀಟರ್ ಉದ್ದದ ಬೈಪಾಸ್, ಪಿರಿಯಾಪಟ್ಟಣದಲ್ಲಿ ೧೯.೯೨ ಕಿಲೋಮೀಟರ್ ಬೈಪಾಸ್, ಹುಣಸೂರು, ಬಿಳಿಕೆರೆಯಲ್ಲಿ ಬೈಪಾಸ್ ಮತ್ತು ಇಲವಾಲ ಬಳಿ ೪.೫೯ ಕಿಲೋಮೀಟರ್ ಉದ್ದದ ಬೈಪಾಸ್ ನಿರ್ಮಾಣಗೊಳ್ಳಲಿದೆ. ಈ ಹೆದ್ದಾರಿಯಲ್ಲಿ ಒಂದು ಫ್ಲೈ ಓವರ್ ಕೂಡ ನಿರ್ಮಾಣಗೊಳ್ಳಲಿದೆ. ಈಗಾಗಲೇ ೮೫೦೬ ಕೋಟಿ ರೂಪಾಯಿಗಳ ವೆಚ್ಚದ ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ವೇ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಮುಂದಿನ ದಸರಾ ವೇಳೆಗೆ ಪೂರ್ಣಗೊಳ್ಳಲಿದೆ. ಅದು ಮುಗಿದ ಕೂಡಲೇ ಈ ಯೋಜನೆಯ ಅನುಷ್ಠಾನ ಚುರುಕಾಗಲಿದೆ ಎಂದು ಅಧಿಕಾರಿಗಳು ಹೇಳಿದರು. ಈಗ ಮಡಿಕೇರಿ -ಬೆಂಗಳೂರು ನಡುವಿನ ಪ್ರಯಾಣದ ಅವಧಿ ೭ ಗಂಟೆಗಳಾಗಿದ್ದು ಈ ನೂತನ ಹೆದ್ದಾರಿ ಪೂರ್ಣಗೊಂಡ ಬಳಿಕ ಪ್ರಯಾಣದ ಅವಧಿ ಕೇವಲ ೪ ಘಂಟೆಗಳಿಗೆ ಇಳಿಕೆ ಆಗಲಿದೆ. ಈ ಹೆದ್ದಾರಿಯಿಂದಾಗಿ ಬೆಂಗಳೂರು- ಮಂಗಳೂರು ನಡುವಿನ ಸಂಪರ್ಕ ಮತ್ತಷ್ಟು ಹೆಚ್ಚಾಗಲಿದ್ದು ವಾಣಿಜ್ಯ ವಹಿವಾಟು , ಬಂದರು ಮೂಲಕ ಆಮದು ರಫ್ತು ವಹಿವಾಟೂ ಹೆಚ್ಚಳಗೊಳ್ಳಲಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೂ ಹೆಚ್ಚಿನ ಅನುಕೂಲ ಆಗುವುದರ ಜೊತೆಗೆ ವಾಣಿಜ್ಯ ಚಟುವಟಿಕೆಯೂ ಹೆಚ್ಚಾಗಲಿದೆ. ವಹಿವಾಟಿನ ಹೆಚ್ಚಳದಿಂದ ಉದ್ಯೋಗಾವಕಾಶವೂ ಹೆಚ್ಚಾಗಲಿದೆ. ಇಂದಿನ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ ಗೌತಮ್ ಬಗಾದಿ , ಶಾಸಕ ಜಿ ಟಿ ದೇವೇಗೌಡ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.