ಶ್ರೀಮಂಗಲ, ಸೆ. ೧೪: ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ನಷ್ಟ ಸಮೀಕ್ಷೆ ನಡೆಸಲು ಕಾಫಿ ಮಂಡಳಿಯ ಅಧಿಕಾರಿಗಳಿಗೆ ಹಾಗೂ ಜಿಲ್ಲೆಯಲ್ಲಿ ಬಹುವಾರ್ಷಿಕ ಬೆಳೆಗಳಾದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಯುತ್ತಿರುವುದರಿಂದ ಈ ಬೆಳೆಗಳನ್ನು ಪ್ರತಿ ವರ್ಷ ಆರ್.ಟಿ.ಸಿ.ಯಲ್ಲಿ ಬೆಳೆ ಕಲಂನಲ್ಲಿ ನಮೂದಿಸುವ ಸಮೀಕ್ಷೆಯನ್ನು ಕೈಬಿಡುವ ಬಗ್ಗೆ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭರವಸೆ ನೀಡಿದ್ದಾರೆ.

ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಯವರನ್ನು ಬೆಳೆಗಾರರ ಒಕ್ಕೂಟದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭ ಈ ಬಗ್ಗೆ ಅವರು ತಿಳಿಸಿದರು.

ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿದ ಪ್ರಮುಖರು ಜಿಲ್ಲೆಯು ಪ್ರತಿವರ್ಷ ಪ್ರಾಕೃತಿಕ ವಿಕೋಪ ಹಾಗೂ ಅತಿವೃಷ್ಟಿಗೆ ಸಿಲುಕುತ್ತಿದ್ದು, ಇದರ ನೇರ ದುಷ್ಪರಿಣಾಮ ಬೆಳೆಗಾರರ ಮೇಲೆ ಬೀರುತ್ತಿದೆ. ಅಪಾರ ಪ್ರಮಾಣದಲ್ಲಿ ಬೆಳೆನಷ್ಟ ಉಂಟಾಗುತ್ತಿದೆ. ಬೆಳೆ ನಷ್ಟದಿಂದ ಬೆಳೆಗಾರ ಸಮುದಾಯ ಆರ್ಥಿಕವಾಗಿ ಹಿಂದುಳಿಯುವAತೆ ಆಗಿದೆ.

ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಅತಿವೃಷ್ಟಿ ಹಾಗೂ ಬಿರುಗಾಳಿಗೆ ತುತ್ತಾಗಿ ಕಾಫಿ, ಕಾಳುಮೆಣಸು, ಅಡಿಕೆ, ಭತ್ತ ಬೆಳೆ ನಷ್ಟವಾಗಿದೆ. ನಿರಂತರ ಮಳೆಯಿಂದ ಈ ಬೆಳೆಗಳು ಅತಿ ತೇವಾಂಶದಿAದ ಕೊಳೆ ರೋಗಕ್ಕೆ ತುತ್ತಾಗಿ ಹೆಚ್ಚಿನ ನಷ್ಟವಾಗಿರುತ್ತದೆ. ಸತತ ಕಳೆದ ಮೂರು ವರ್ಷದಿಂದ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ ಬೆಳೆನಷ್ಟವಾಗಿದ್ದು, ಮತ್ತೆ ರೈತ ಹಾಗೂ ಬೆಳೆಗಾರ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಬೆಳೆ ನಷ್ಟ ಸಮೀಕ್ಷೆ ನಡೆಸುವ ಸಂದರ್ಭ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಮಳೆಯ ಸರಾಸರಿಯನ್ನು ಪರಿಗಣಿಸದೇ ಹೋಬಳಿ ಮಟ್ಟದಲ್ಲಿ ಆಗಿರುವ ಒಟ್ಟು ಮಳೆಯ ಅಂಕಿ

(ಮೊದಲ ಪುಟದಿಂದ) ಅಂಶವನ್ನು ಪರಿಶೀಲಿಸಿ ಸಮೀಕ್ಷೆ ನಡೆಸಿದಾಗ ಮಾತ್ರ ನೈಜ ಬೆಳೆ ನಷ್ಟದ ಮನವರಿಕೆಯಾಗಲಿದೆ ಎಂದು ಗಮನ ಸೆಳೆದರು.

ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಆರ್.ಟಿ.ಸಿಯಲ್ಲಿ ಬೆಳೆ ನಮೂದು ಮಾಡುವ ಕಾರ್ಯಕ್ರಮದ ಮೊಬೈಲ್ ಆ್ಯಪ್‌ನಲ್ಲಿ ಸಂಬAಧಿಸಿದ ಅಪ್ಲಿಕೇಷನ್‌ನಲ್ಲಿ ಸ್ವಯಂ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಬಹಳಷ್ಟು ಅವಿದ್ಯಾವಂತ, ವಯೋವೃದ್ಧ ಹಾಗೂ ಸ್ಮಾರ್ಟ್ ಫೋನ್ ಇಲ್ಲದ ರೈತರು, ಬೆಳೆಗಾರರಿಗೆ ಈ ಸ್ವಯಂ ಬೆಳೆ ದಾಖಲಾತಿ ನಮೂದಿಸಲು ಸಾಧ್ಯವಾಗುತ್ತಿಲ್ಲ.

ಕೊಡಗು ಜಿಲ್ಲೆಯಲ್ಲಿ ಬಹುವಾರ್ಷಿಕ ಬೆಳೆಗಳಾದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇತರ ಜಿಲ್ಲೆಗಳಂತೆ ಪ್ರತಿ ವರ್ಷ ಹಾಗೂ ೪ರಿಂದ ೬ ತಿಂಗಳಿನಲ್ಲಿ ಬೆಳೆ ಬದಲಾಗುವುದಿಲ್ಲ. ಜಿಲ್ಲೆಯ ಮಟ್ಟಿಗೆ ಆರ್.ಟಿ.ಸಿ ಯಲ್ಲಿ ಬೆಳೆ ದಾಖಲು ಮಾಡುವ ಈ ಕಾರ್ಯಕ್ರಮವನ್ನು ಕೈಬಿಡಬೇಕಾಗಿ ಕೋರಿದರು. ಅಲ್ಲದೆ ೪ ರಿಂದ ೬ ತಿಂಗಳಲ್ಲಿ ಆರ್.ಟಿ.ಸಿ.ಗಳಲ್ಲಿ ನಮೂದಾಗಿರುವ ಬೆಳೆಯನ್ನು ತೆಗೆದು ಹಾಕಲಾಗುತ್ತಿದ್ದು, ಇದರಿಂದ ಬ್ಯಾಂಕಿನಲ್ಲಿ ಸಾಲ ಪಡೆಯಲು, ಸರಕಾರದ ಸೌಲಭ್ಯ ಹಾಗೂ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ರೈತರು ಹಾಗೂ ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ಬೆಳೆ ನಮೂದನ್ನು ಬೆಳೆ ಕಲಂನಿAದ ತೆಗೆಯದೇ ಬೆಳೆಗಾರರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿ ಮನವಿ ಮಾಡಿದರು.

ಬೆಳೆಗಾರರು ಹಾಗೂ ರೈತರು ಬ್ಯಾಂಕಿನಲ್ಲಿ ಸಾಲ ಪಡೆದು ಅದನ್ನು ಸಂಪೂರ್ಣ ಪಾವತಿಸಿದ ನಂತರ ಬ್ಯಾಂಕಿನವರು ಸಾಲ ಮರುಪಾವತಿಸಿದ ಋಣಮುಕ್ತ ಬಗ್ಗೆ ನೋಂದಾವಣೆÂ ಕಚೇರಿಯಲ್ಲಿ ಮಾಡಿಕೊಂಡಿರುವ ನೋಂದಾವಣಿ ಯಲ್ಲಿ ಅಳಿಸಲು ಪತ್ರವನ್ನು ನೀಡಿದ್ದರೂ ನೋಂದಾವಣಿ ಕಚೇರಿಯಲ್ಲಿ ಕನಿಷ್ಟ ಇಬ್ಬರು ಸಾಕ್ಷಿದಾರರನ್ನು ಕೇಳುತ್ತಿರುವುದು ಬೆಳೆಗಾರರಿಗೆ ಹಾಗೂ ರೈತರಿಗೆ ತೀವ್ರ ತೊಂದರೆ ಹಾಗೂ ಖರ್ಚಿಗೆ ತುತ್ತಾಗುವಂತಾಗಿದೆ. ಈ ಬಗ್ಗೆ ಸಾಲ ಮುಗಿದ ನಂತರ ಬ್ಯಾಂಕಿನವರೇ ನೇರವಾಗಿ ನೋಂದಾವಣಿ ಕಚೇರಿಗೆ ಸಾಲ ಮುಕ್ತ ಪತ್ರವನ್ನು ರವಾನಿಸಿ ನೋಂದಾವಣಿಯಲ್ಲಿ ರದ್ದುಗೊಳಿಸು ವಂತೆ ವಿವರಿಸಿದರು.

ಇದಲ್ಲದೇ ಪಡಿತರ ಚೀಟಿ, ಇ.ಕೆ.ವೈ.ಸಿ ಮಾಡುವ ಸಮಯವನ್ನು ವಿಸ್ತರಿಸಬೇಕು. ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ನಿಗದಿತ ಅವಧಿಯಲ್ಲಿ ಈ ಪ್ರಕ್ರಿಯೆ ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಈ ಸಂದರ್ಭ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್‌ಮಾದಪ್ಪ, ಖಜಾಂಚಿ ಮಾಣೀರ ವಿಜಯ್‌ನಂಜಪ್ಪ, ಸದಸ್ಯರುಗಳಾದ ಕಾಳಿಮಾಡ ತಮ್ಮುಮುತ್ತಣ್ಣ, ಕಡೇಮಾಡ ಕುಸುಮಾ ಜೋಯಪ್ಪ, ಮದ್ರೀರ ಗಿರೀಶ್‌ಗಣಪತಿ, ಕೋಳೆರ ಭಾರತಿ, ಕೋಡಿಮಣಿಯಂಡ ವಿಶ್ವನಾಥ್, ಅಚ್ಚೆಯಂಡ ವೇದಿತ್‌ಮುತ್ತಪ್ಪ ಹಾಜರಿದ್ದರು.